ಕರಾವಳಿಸುಳ್ಯ

ರಸ್ತೆ ಬದಿ ಹಾಕಲಾಗಿದ್ದ ಜಲ್ಲಿ ರಾಶಿ ಮೇಲೆಯೇ ಹತ್ತಿದ ಕಾರು!,ಗಾಯಗೊಂಡ ಚಾಲಕ

ನ್ಯೂಸ್ ನಾಟೌಟ್ : ನೆಲ್ಯಾಡಿ ಭಾಗದಲ್ಲಿ ವಾಹನ ಚಲಾಯಿಸಿಕೊಂಡು ಸಂಚಾರ ಮಾಡುವುದೇ ತೀವ್ರ ಕಷ್ಟವೆನಿಸಿದೆ.ಒಂದೆಡೆ ರಸ್ತೆ ಕಾಮಗಾರಿಯೂ ನಡೆಯುತ್ತಿದೆ.ಇನ್ನೊಂದೆಡೆ ಅಪಘಾತ ಪ್ರಕರಣಗಳು ಕೂಡ ಜಾಸ್ತಿಯಾಗುತ್ತಿದೆ.

ಇದೀಗ  ರಸ್ತೆ ಕಾಮಗಾರಿಗಾಗಿ ಹೆದ್ದಾರಿ ಬದಿ ಹಾಕಿದ್ದ ಜಲ್ಲಿ ರಾಶಿಯ ಮೇಲೆಯೇ ಕಾರು ಚಲಾಯಿಸಿ ಚಾಲಕ ಗಾಯಗೊಂಡ ಘಟನೆ ವರದಿಯಾಗಿದೆ. ನೆಲ್ಯಾಡಿ ಸಮೀಪದ ಉದನೆಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ಚಾಲಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುತ್ತಿದ್ದಾಗ ಜಲ್ಲಿ ರಾಶಿ ಮೇಲೆಯೇ ಕಾರು ಚಲಿಸಿದ ಪರಿಣಾಮ ಕಾರು ಚಾಲಕ ಹಾಗೂ ನೆಲ್ಯಾಡಿಯ ಉದ್ಯಮಿ ಶಿಬು ವರ್ಗೀಸ್‌ರವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

Related posts

ಮೈಸೂರು ನೋಟು ಮುದ್ರಣ ಸಂಸ್ಥೆಯಲ್ಲಿ ಭರ್ಜರಿ ಉದ್ಯೋಗವಕಾಶ, ಸಂಬಳ ಎಷ್ಟು..? ಇಲ್ಲಿದೆ ಸಂಪೂರ್ಣ ಮಾಹಿತಿ

1753ನೇ ಮದ್ಯವರ್ಜನ ಶಿಬಿರದ ಆಮಂತ್ರಣ ಪತ್ರಿಕೆ ಬಿಡುಗಡೆ, ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಶ್ರೀಕ್ಷೇತ್ರ ಧರ್ಮಸ್ಥಳದ ಖಾವಂದರಾದ ಡಾ ಡಿ. ವೀರೇಂದ್ರ ಹೆಗ್ಗಡೆ

ಅಂತಾರಾಷ್ಟ್ರೀಯ ನ್ಯತ್ಯ ಸ್ಪರ್ಧೆ: ತೊಡಿಕಾನದ ಧನ್ಯ ಮಯ್ಯ ಪ್ರಥಮ