ಕರಾವಳಿ

ಕೊರಗಜ್ಜನ ವೇಷ ಧರಿಸಿ ಅವಹೇಳನ ಪ್ರಕರಣ: ಆರೋಪಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ವಿಟ್ಲ: ಕರಾವಳಿಯಾದ್ಯಂತ ಭಾರಿ ಸದ್ದು ಮಾಡಿದ್ದ ಕೊರಗಜ್ಜನ ಅವಹೇಳನಕಾರಿ ವೇಷಭೂಷಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗ ಮತ್ತೊಂದು ತಿರುವು ಸಿಕ್ಕಿದೆ. ಕೊರಗಜ್ಜನ ವೇಷ ಧರಿಸಿ ಕುತ್ತಿಗೆಗೆ ಚಪ್ಪಲು ಹಾಕಿಕೊಂಡು ಬಂದಿದ್ದ ಮದುಮಗ ಉಮರುಲ್ ಭಾಷಿತ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮಂಗಳೂರು 4ನೇ ಹೆಚ್ಚುವರಿ ಸೆಷನ್ಸ್ ನ್ಯಾಯಲಯ ವಜಾ ಮಾಡಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಆತನ ಕಾನೂನು ಹೋರಾಟ ಮತ್ತೆ ಮುಂದುವರಿಯುವಂತಾಗಿದೆ. ಈತನ ಒಂದು ತಪ್ಪಿನಿಂದಾಗಿ ಕರಾವಳಿಯಾದ್ಯಂತ ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತ್ತು. ಸ್ವತಃ ಮುಸ್ಲಿಂ ಸಮುದಾಯವೇ   ಉಮರುಲ್ ನ ನೀಚ ಕೃತ್ಯವನ್ನು ಖಂಡಿಸಿದ್ದನ್ನು ಸ್ಮರಿಸಬಹುದು.

Related posts

ಸುಳ್ಯ ತಾಲೂಕಿನ ಸಾಹಿತ್ಯ ಪ್ರಿಯರಿಗೆ ಸಂಭ್ರಮದ ದಿನ, ವಿಧಾನಸೌಧದಲ್ಲಿ ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಾ. ಪುರುಷೋತ್ತಮ ಬಿಳಿಮಲೆ

ಪುತ್ತೂರು: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಪರ ಪ್ರಚಾರ ಸಭೆ, ಕುಂದುಕೊರತೆ ಹಂಚಿಕೊಂಡ ಗ್ರಾಮಸ್ಥರು!

ಚಾರ್ಮಾಡಿ ಘಾಟಿಯಲ್ಲಿ ಆನೆ ಸವಾರಿ..! ಭಯಭೀತರಾದ ವಾಹನ ಸವಾರರು