ದೇಶ-ವಿದೇಶವೈರಲ್ ನ್ಯೂಸ್

ತನ್ನ ಯುಟ್ಯೂಬ್ ವಾಹಿನಿಗೆ ಸಂದರ್ಶನ ನೀಡುವಂತೆ ಪೊಲೀಸ್ ಅಧಿಕಾರಿಗೆ ಯೂಟ್ಯೂಬರ್ ನಿಂದ ಬೆದರಿಕೆ..! ಆರೋಪಿ ಅರೆಸ್ಟ್..!

ನ್ಯೂಸ್ ನಾಟೌಟ್ : ತನ್ನ ಯೂಟ್ಯೂಬ್ ವಾಹಿನಿಗೆ ಸಂದರ್ಶನ ನೀಡಲು ನಿರಾಕರಿಸಿದ ಪೊಲೀಸ್ ಅಧಿಕಾರಿಗೆ ಯೂಟ್ಯೂಬರ್ ಒಬ್ಬ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ.
ಬೆದರಿಕೆ ಹಾಕಿರುವ ಮಶಕೂರ್ ರಾಜಾ ದಾದಾ ಎಂಬಾತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ನವೆಂಬರ್ 24 ರಂದು ಉತ್ತರ ಪ್ರದೇಶದ ಸಂಭಾಲ್‌ ನಲ್ಲಿ ನಡೆದಿದ್ದ ಕೋಮು ಗಲಭೆಯ ಬಗ್ಗೆ ಸಂಭಲ್ನ ಚಂದೌಸಿ ಸರ್ಕಲ್ ಪೊಲೀಸ್ ಇನ್ಸ್‌ ಪೆಕ್ಟರ್ ಸಂಜು ಕುಮಾರ್ ಚೌಧರಿಗೆ ಸಂದರ್ಶನ ನೀಡಲು ಆರೋಪಿ ಒತ್ತಾಯಿಸುತ್ತಿದ್ದ.

ಪೊಲೀಸ್ ಅಧಿಕಾರಿಯು ಸಂದರ್ಶನ ನೀಡಲು ಒಪ್ಪದಿದ್ದಾಗ ಆರೋಪಿ, ‘ನಾನು ಹೇಳಿದರೆ ಡಿಜಿಪಿ, ಸಿಎಂ ಬಂದು ಸಂದರ್ಶನ ಕೊಡುತ್ತಾರೆ. ಒಲ್ಲೆ ಎನ್ನಲು ನೀನಾರು, ನೋಡಿಕೊಳ್ಳುತ್ತೇನೆ’ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಬಿಜೆಪಿ ಕಾರ್ಯಕರ್ತನೆಂದು ಹೇಳಿಕೊಂಡಿರುವ ಯೂಟ್ಯೂಬರ್, ಪೊಲೀಸ್ ಅಧಿಕಾರಿಯ ಸಂದರ್ಶನ ಮಾಡಿ ದೇಶದಾದ್ಯಂತ ಪ್ರಚಾರ ಪಡೆಯುತ್ತೇನೆ ಎಂದು ಹೇಳಿಕೊಂಡಿದ್ದ ಎಂದು ಆರೋಪಿಸಲಾಗಿದೆ. ಈಗ ಹಲವು ದಿನಗಳ ಬಳಿಕ ಈತನನ್ನು ಬಂಧಿಸಲಾಗಿದೆ.

ಸಂಭಲ್‌ ಜಿಲ್ಲೆಯ ಚಂದೌಸಿಯಲ್ಲಿನ ಶಾಹಿ ಜಾಮಾ ಮಸೀದಿಯಲ್ಲಿ ನ್ಯಾಯಾಲಯದ ಆದೇಶದಂತೆ ಅಧಿಕಾರಿಗಳು ನವೆಂಬರ್‌ 24ರಂದು ಸಮೀಕ್ಷೆ ನಡೆಸಲು ಮುಂದಾದಾಗ ನಡೆದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿದ್ದರು.

Click

https://newsnotout.com/2024/12/700-bore-well-kannada-news-19-hours-issue-kannada-news-d/
https://newsnotout.com/2024/12/mother-got-currect-shock-and-injured-infront-of-baby-kad/
https://newsnotout.com/2024/12/8-month-ago-shop-opened-by-friends-kannada-news-case/
https://newsnotout.com/2024/12/air-bag-blast-kannada-news-viral-news-d/
https://newsnotout.com/2024/12/udupi-man-fall-into-well-kananda-news-fire-force-helps/
https://newsnotout.com/2024/12/hotel-love-marriage-life-kannada-news-girlfriend-s/

Related posts

ಹತ್ಯೆಗೂ ಮುನ್ನ ಹಮಾಸ್ ಮುಖ್ಯಸ್ಥನ ಕೊನೆ ಕ್ಷಣಗಳ ಡ್ರೋನ್ ದೃಶ್ಯ ಬಿಡುಗಡೆ ಮಾಡಿದ ಇಸ್ರೇಲ್..! ಇಲ್ಲಿದೆ ವಿಡಿಯೋ

ಮೂಡುಬಿದಿರೆ: ವಿದ್ಯಾರ್ಥಿನಿ ನಿಗೂಢ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್..! ಊರ ಪ್ರಿಯಕರನೊಂದಿಗೆ ಕೇರಳದಲ್ಲಿ ಮದುವೆ..!

ವಾಹನಗಳನ್ನು ಎತ್ತಿ ಎಸೆದದ್ದೇಕೆ ಆ ಆನೆ..? ಆನೆಯನ್ನು ಲಾರಿಯಿಂದ ಕೆಳಗಿಳಿಸುವಾಗ ನಡೆಯಿತಾ ಅಚಾತುರ್ಯ..? ಈ ಘಟನೆ ನಡೆದದ್ದೆಲ್ಲಿ?