ಕರಾವಳಿ

ಮಹಿಳಾ ವೈದ್ಯೆಗೆ ಶಾಸಕನಿಂದ ಅವಮಾನ

ಉಡುಪಿ: ಬೈಂದೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಂತ ವೈದ್ಯೆಯಾಗಿರುವ ಡಾ.ವೀಣಾ ನಾರಾಯಣ ಶಿರೂರು ಅವರನ್ನು ಅಂಕೋಲಾದ ಆಸ್ಪತ್ರೆಗೆ ಅನವಶ್ಯಕವಾಗಿ ವರ್ಗಾವಣೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹಾಗೂ ಇತರ 12 ಮಂದಿ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ದಾಖಲಾದ ದೂರಿನ ಪ್ರಕಾರ, ಶಾಸಕ ಸುಕುಮಾರ್ ಶೆಟ್ಟಿ ಅವರು ಡಾಕ್ಟರ್ ವತ್ಸಲಾ ಗೋಣಿ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಸರ್ಕಾರಿ ಆಸ್ಪತ್ರೆಯಿಂದ ಬೈಂದೂರಿಗೆ ಹಾಗೂ ಡಾ. ವೀಣಾ ಅವರನ್ನು ಅಂಕೋಲಾಗೆ ವರ್ಗಾಯಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ.

Related posts

ಉಳ್ಳಾಲ: ನಾಯಕರಿಗೆ ಮಾಹಿತಿ ನೀಡದೆ ನಾಮಪತ್ರ ವಾಪಸ್ ಪಡೆದ ಜೆಡಿಸ್‌ ಅಭ್ಯರ್ಥಿ !

‘ನ್ಯೂಸ್ ನಾಟೌಟ್’ ವರದಿ ತಿರುಚಿ ಬರೆದು ಸಿಕ್ಕಿಬಿದ್ದ ಕಿಡಿಗೇಡಿಗಳು..!, ಶೇರ್‌ ಮಾಡಿ ವಿಕೃತಿ ಮೆರೆದವರಿಗೂ ತಟ್ಟಲಿದೆ ಬಿಸಿ

ಕನ್ನಡ ಸಿನಿಮಾ ಜಪಾನ್ ನಲ್ಲಿ ಬಿಡುಗಡೆ, ‘777 ಚಾರ್ಲಿ’ ಗೆ ರಷ್ಯಾ, ಲ್ಯಾಟಿನ್ ಅಮೆರಿಕ, ಜರ್ಮನಿ, ತೈವಾನ್ ನಲ್ಲೂ ಬೇಡಿಕೆ