ಕರಾವಳಿವೈರಲ್ ನ್ಯೂಸ್

ಕಡಲತೀರದಲ್ಲಿ ಎರಡು ಬೃಹತ್ ತಿಮಿಂಗಿಲಗಳ ಕಳೆಬರಹ ಪತ್ತೆ..! ತಿಮಿಂಗಿಲಗಳಿಗೆ ಹಡಗು ಡಿಕ್ಕಿಯಾಯ್ತೇ?

ನ್ಯೂಸ್‌ ನಾಟೌಟ್‌: ಎರಡು ಬಲೀನ್ ತಿಮಿಂಗಿಲಗಳ ಕಳೆಬರಹ ಹೊನ್ನಾವರ ತಾಲ್ಲೂಕಿನ ಮುಗಳಿ ಕಡಲಧಾಮ ಪ್ರದೇಶದಲ್ಲಿ ಶನಿವಾರ ಪತ್ತೆಯಾಗಿದೆ.

ಈಗ ಅದೇ ಪ್ರದೇಶದಿಂದ ಸ್ವಲ್ಪ ದೂರದಲ್ಲಿ ಅಂದಾಜು 25 ಮೀ. ಉದ್ದದ ಹೆಣ್ಣು ತಿಮಿಂಗಿಲದ ಕಳೆಬರ ಪತ್ತೆಯಾಗಿದೆ. ಈ ಕಳೆಬರ ಸಿಕ್ಕ ಜಾಗದ 700 ಮೀ. ದೂರದಲ್ಲಿ ಮರಿಯೊಂದರ ಕಳೆಬರಹ ದೊರೆತಿದೆ.

‘ಬಲೀನ್ ತಿಮಿಂಗಿಲಗಳ ಸಂತಾನೋತ್ಪತ್ತಿಯ ಅವಧಿ ಇದಾಗಿದ್ದು ಶೀತವಲಯದಿಂದ ನೇತ್ರಾಣಿ, ಮುಗಳಿ ಕಡಲತೀರಕ್ಕೆ ಸಮೀಪಕ್ಕೆ ಬರುತ್ತವೆ. ಹೀಗೆ ಬರುವ ವೇಳೆ ತಿಮಿಂಗಿಲಗಳಿಗೆ ಹಡಗು ಡಿಕ್ಕಿಯಾಗಿ ಮೃತಪಟ್ಟಿರುವ ಸಾಧ್ಯತೆ ಇದೆ’ ಎಂದು ಕಡಲಜೀವಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಕಳೆದ ವಾರ 35 ಮೀ ಉದ್ದದ ಗಂಡು ತಿಮಿಂಗಿಲದ ಕಳೆಬರ ಪತ್ತೆಯಾಗಿತ್ತು. ‘ತಿಮಿಂಗಿಲದ ಕಳೆಬರಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ಕಡಲಜೀವಶಾಸ್ತ್ರ ಅಧ್ಯಯನ ಕೇಂದ್ರದ ತಜ್ಞರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಬಹುದು ಎನ್ನಲಾಗಿದೆ.

Related posts

ಅಕ್ಷಯ್ ಕಲ್ಲೇಗ ಕೊಲೆ ಕೇಸ್ ಗೆ ಬಿಗ್ ಟ್ವಿಸ್ಟ್, ಕಾಂಗ್ರೆಸ್ ಮುಖಂಡನೂ ಈಗ ಪೊಲೀಸ್ ವಶಕ್ಕೆ, ಸ್ನೇಹಿತನ ಪರವಾಗಿ ಮಾತನಾಡಿದ್ದೇ ಸಾವಿಗೆ ಕಾರಣವಾಯಿತೇ..?

ಕಡಬ:ಇಬ್ಬರನ್ನು ಬಲಿ ಪಡೆದ ರೆಂಜಿಲಾಡಿಯಲ್ಲಿ ಮತ್ತೆ ಕಾಡಾನೆಗಳು ಪ್ರತ್ಯಕ್ಷ ,ದೊಡ್ಡ ಆನೆಯೊಂದಿಗೆ ಸಂಚರಿಸುತ್ತಿರುವ ಮರಿಯಾನೆ-ವಿಡಿಯೋ ವೈರಲ್

ಚಿಟ್ ಫಂಡ್ ಹೆಸರಲ್ಲಿ ಕೋಟ್ಯಂತರ ರೂ. ಉಂಡೆನಾಮ ತಿಕ್ಕಿದ ಗಂಡ-ಹೆಂಡತಿ