ಕ್ರೈಂ

ಅಪ್ಪನ ಜತೆ ಮಲಗಿದ್ದ 1 ವರ್ಷದ ಮಗುವನ್ನು ಎಳೆದೊಯ್ದ ಬೀದಿ ನಾಯಿಗಳ ಗುಂಪು,ಹೊರಗೋಡಿ ನೋಡಿದಾಗ ಶವವಾಗಿ ಬಿದ್ದಿತ್ತು ಪುಟ್ಟ ಕಂದಮ್ಮ..!

ನ್ಯೂಸ್ ನಾಟೌಟ್‌ : ರಾತ್ರಿ 1.30ರ ಹೊತ್ತು. ಬೆಳಗಾಗೋದಕ್ಕೆ ಇನ್ನೂ ಟೈಂ ಇತ್ತು.ಅಪ್ಪ ಗಾಢ ನಿದ್ದೆಯಲ್ಲಿದ್ದರು.ಮಗುವೂ ಕೂಡ ಗಾಢ ನಿದ್ದೆಯಲ್ಲಿತ್ತು.ಅಷ್ಟರಲ್ಲಾಗಲೇ ಗುಡಿಸಲಿನ ಒಳಗೆ ತಂದೆಯ ಜತೆ ಮಲಗಿದ್ದ ಒಂದು ವರ್ಷದ ಹಸುಳೆಯನ್ನು ಬೀದಿ ನಾಯಿಗಳ ಹಿಂಡು ಕಚ್ಚಿ ಸಿಗಿದು ತಿಂದು ತೇಗಿದೆ.

ಈ ಎದೆ ನಡುಗಿಸುವ ಘಟನೆ ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದೆ.ಶಂಶಾಬಾದ್‌ನಲ್ಲಿ ಗುರುವಾರ ನಸುಕಿನಲ್ಲಿ ಅಪ್ಪನ ಮಗ್ಗುಲಿನಲ್ಲಿ ಬೆಚ್ಚಗೆ ನಿದ್ದೆಯಲ್ಲಿದ್ದ ಗಂಡು ಮಗುವನ್ನು ಹೊರಗೆ ಎಳೆದುಕೊಂಡು ಬಂದಿದ್ದ ಬೀದಿ ನಾಯಿಗಳ ಗುಂಪು, ಅದನ್ನು ಮುಗಿಬಿದ್ದು ತಿನ್ನುತ್ತಿರುವ ಭಯಾನಕ ದೃಶ್ಯವನ್ನು ಕಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಗುವಿನ ತಂದೆ ಕೆ ಸೂರ್ಯ ಕುಮಾರ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಆರ್‌ಜಿಐ ಏರ್‌ಪೋರ್ಟ್ ಇನ್‌ಸ್ಪೆಕ್ಟರ್ ಕೆ.ಬಾಲರಾಜು ತಿಳಿಸಿದ್ದಾರೆ.

ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಸೂರ್ಯ ಕುಮಾರ್ ಅವರು ಶಂಶಾಬಾದ್ ಪಟ್ಟಣದ ರಾಜೀವ್ ಗೃಹಕಲ್ಪ ಸಂಕೀರ್ಣದ ಸಮೀಪ ನಿರ್ಮಿಸಿರುವ ತಾತ್ಕಾಲಿಕ ಗುಡಿಸಲಿನಲ್ಲಿ ವಾಸವಿದ್ದರು. ಬುಧವಾರ ರಾತ್ರಿ ಅವರು ತಮ್ಮ ಒಂದು ವರ್ಷದ ಮೊದಲ ಮಗ ಕೆ ನಾಗರಾಜು, 20 ತಿಂಗಳ ನವಜಾತ ಶಿಶು ಹಾಗೂ ಕುಟುಂಬದ ಇತರರೆ ಸದಸ್ಯರ ಜತೆ ಗುಡಿಸಲಿನಲ್ಲಿ ಮಲಗಿದ್ದರು. ಆದರೆ ಇತ್ತೀಚೆಗಷ್ಟೇ ಎರಡನೇ ಮಗುವಿಗೆ ಜನ್ಮ ನೀಡಿದ್ದ ಸೂರ್ಯಕುಮಾರ್ ಪತ್ನಿ ಘಟನೆ ನಡೆದಾಗ ಅಲ್ಲಿ ಇರಲಿಲ್ಲ.

ರಾತ್ರಿ 1.30ರ ಸುಮಾರಿಗೆ, ಬೀದಿ ನಾಯಿಗಳ ಹಿಂಡು ಮಗುವನ್ನು ಕಚ್ಚಿ ತಿನ್ನುವುದನ್ನು ಕಂಡ ಸ್ಥಳೀಯರು, ಸೂರ್ಯ ಕುಮಾರ್‌ನನ್ನು ಎಬ್ಬಿಸಿದ್ದರು. ಅವರು ಹೊರಗೋಡಿ ಬಂದಾಗ, ಪುಟ್ಟ ಕಂದಮ್ಮ ಶವವಾಗಿ ಬಿದ್ದಿತ್ತು.”ನಾವು ಮಗುವಿಗೆ ಹಾಲು ಕುಡಿಸಿ, ರಾತ್ರಿ 12.15ರ ಹಾಗೆ ಮಲಗಿದ್ದೆವು. ಆಗ ಯಾವುದೇ ಅನುಮಾನ ಉಂಟುಮಾಡುವ ಸನ್ನಿವೇಶ ಇರಲಿಲ್ಲ” ಎಂದು ಸೂರ್ಯಕುಮಾರ್ ಪೊಲೀಸರಿಗೆ ತಿಳಿಸಿದ್ದಾರೆ. ರಸ್ತೆಯಲ್ಲಿ ಸತ್ತು ಬಿದ್ದಿದ್ದ ಮಗುವಿನ ದೇಹದ ಸುತ್ತಲೂ ಸುಮಾರು ಆರು ನಾಯಿಗಳು ನಿಂತಿರುವುದನ್ನು ಕಂಡು ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಗುವಿನ ದೇಹದ ಮೇಲೆಲ್ಲಾ ಗಾಯಗಳಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

Related posts

ಅಪಘಾತದಲ್ಲಿ ಗಾಯಗೊಂಡಿದ್ದ ಮೆಸ್ಕಾಂ ಎಇಇ ಪ್ರವೀಣ್‌ ಜೋಶಿ ಸಾವು

ದರ್ಶನ್ ಇರುವ ಬಳ್ಳಾರಿ ಜೈಲಿನಲ್ಲಿ ನಾಲ್ಕು ಅಡಿ ಎತ್ತರದ ಗಣೇಶನ ಮೂರ್ತಿ ಪ್ರತಿಷ್ಠಾಪನೆ, ಜೈಲಿನಲ್ಲಿ ಗಣೇಶ ಹಬ್ಬಕ್ಕೆ ಸ್ಟಾರ್ ಕಳೆ..!

4ರ ಬಾಲಕ ಮೇಲೆ ಹರಿದ ಕಾರು..! ಮನೆ ಮುಂದೆಯ ರಸ್ತೆಯಲ್ಲಿ ಆಡುತ್ತಿದ್ದ ಮಗುವಿನ ದೇಹ ಛಿದ್ರ-ಛಿದ್ರ..!