ಕರಾವಳಿ

ಡಿ. 25, 26 ರಂದು ಕೆವಿಜಿ ಸುಳ್ಯ ಹಬ್ಬ

ನ್ಯೂಸ್ ನಾಟೌಟ್ : ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟ್ರಮಣ ಗೌಡರ 94ನೇ  ಜಯಂತ್ಯೋತ್ಸವದ ಕೆ.ವಿ.ಜಿ. ಸುಳ್ಯ ಹಬ್ಬ ಆಚರಣೆ ಡಿ.25,26 ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ  ನಡೆಯಲಿದೆ  ಎಂದು  ಕೆವಿಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘ (ರಿ.)ದ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಗುರುವಾರ ಸುಳ್ಯದ  ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ವೇಳೆ ಮಾತನಾಡಿದ ದೊಡ್ಡಣ್ಣ ಬರೆಮೇಲು, ಡಾ. ಕುರುಂಜಿ ವೆಂಕಟ್ರಮಣ ಗೌಡರ ಜನ್ಮದಿನದಂದು ಕೆ.ವಿ.ಜಿ ಸುಳ್ಯ  ಹಬ್ಬ ಎಂಬ ಹೆಸರಲ್ಲಿ 2011 ರಿಂದ ಆಚರಿಸಿಕೊಂಡು ಬರುತ್ತಿದ್ದು, ಇದೀಗ ಪ್ರತಿವರ್ಷದಂತೆ ಈ ವರ್ಷ ಕೂಡ ಸುಳ್ಯ ಹಬ್ಬ ಆಚರಣೆ ಮಾಡಲಾಗುತ್ತದೆ. ಈ ಹಬ್ಬದ ಪ್ರಯುಕ್ತ ಸಾಧಕರಿಗೆ ಕೆ.ವಿ.ಜಿ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು. ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಸ್ಥಾಪಕ ಜಯಪ್ರಕಾಶ್ ರೈ,  ಕಾರ್ಯದರ್ಶಿ ಹರೀಶ್ ಉಬರಡ್ಕ , ಕೋಶಧಿಕಾರಿ ಆನಂದ ಖಂಡಿಗ, ಕಾರ್ಯಕ್ರಮದ ಸಂಯೋಜಕ ಮತ್ತು  ಸಂಚಾಲಕ ಜ್ಞಾನೇಶ್ ಎನ್ ಎ, ಪೂರ್ವ ಅಧ್ಯಕ್ಷ ಚಂದ್ರ ಕೋಲ್ಚಾರ್ ಮತ್ತು ಪಿ,ಸಿ. ಜಯರಾಮ, ವೇದಿಕೆ ಅಲಂಕಾರ ಸಮಿತಿ ಅಧ್ಯಕ್ಷ ರಾಜು ಪಂಡಿತ್ ಉಪಸ್ಥಿತರಿದ್ದರು.

Related posts

ಬೆಂಗಳೂರು:ಮೆಟ್ಟಿಲುಗಳಿಗೆ ನಮಸ್ಕಾರ ಮಾಡಿ ವಿಧಾನಸೌಧಕ್ಕೆ ಪ್ರವೇಶಿದ ಸುಳ್ಯದ ಶಾಸಕಿ!

ಧರ್ಮಸ್ಥಳದ ಸೌಜನ್ಯ ಕುಟುಂಬ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ ಬದ್ಧ, ಸಂತ್ರಸ್ತ ಕುಟುಂಬದ ಮೇಲಿನ ಹಲ್ಲೆ, ಬೆದರಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ’

ಪ್ರೇಮ ವಿವಾಹವಾಗಿದ್ದ ಮನೆ ಮಗಳನ್ನು ಹುಡುಗನ ಮನೆಗೆ ನುಗ್ಗಿ ಅಪಹರಿಸಿದ ಗ್ಯಾಂಗ್! ಏನಿದು ಕೇರಳ ಕರ್ನಾಟಕ ನಡುವಿನ ಪ್ರೇಮ ದಂಗಲ್!