Uncategorized

ಆನ್‌ಲೈನ್‌ ಕ್ಲಾಸ್‌ಗಾಗಿ ಮರ ಏರಿದ ವಿದ್ಯಾರ್ಥಿ ಕೆಳಕ್ಕೆ ಬಿದ್ದು ಗಂಭೀರ

ಕಾಸರಗೋಡು: ಈಗ ಎಲ್ಲೆಡೆ ಆನ್‌ಲೈನ್‌ ಕ್ಲಾಸ್‌ಗಳದ್ದೇ ಮಾತು. ಹಳ್ಳಿಯಲ್ಲಿ ವರ್ಕ್ ಫ್ರಮ್ ಹೋಮ್‌ ಇರುವವರು, ವಿದ್ಯಾರ್ಥಿಗಳು ಸರಿಯಾಗಿ ನೆಟ್‌ವರ್ಕ್ ಸಿಗದೆ ನಿತ್ಯ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ನೆಟ್‌ವರ್ಕ್ ಪಡೆಯುವುದಕ್ಕೆ ಇಲ್ಲದ ಸರ್ಕಸ್ ಮಾಡುತ್ತಿರುತ್ತಾರೆ. ಇಂತಹುದೇ ಸರ್ಕಸ್‌ ನಡೆಸಿ ಮರೆದ ಮೇಲಿಂದ ಕೆಳಕ್ಕೆ ಬಿದ್ದು ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಕಣ್ಣೂರಿನ ಕಣ್ಣವ ಬಳಿ ನಿನ್ನೆ ಸಂಜೆ ನಡೆದಿದೆ. ಗಾಯಗೊಂಡ ವಿದ್ಯಾರ್ಥಿ ಅನಂತು ಬಾಬು ನನ್ನು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ಲಸ್ ವನ್ ಅಲೋಟ್ ಮೆಂಟ್ ವೀಕ್ಷಿಸಲು ಈತ ಮನೆ ಸಮೀಪದ ಮರ ಏರಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಮೊಬೈಲ್ ರೇಂಜ್ ಲಭಿಸದಿರುವುದರಿಂದ ಮರವೇರಿ ರೆಂಬೆಯಲ್ಲಿ ಕುಳಿತು ವೀಕ್ಷಿಸುತ್ತಿದ್ದಾಗ ಆಕಸ್ಮಿಕವಾಗಿ ಕೆಳಬಿದ್ದು ಈ ಘಟನೆ ನಡೆದಿದ್ದು ,ಬೆನ್ನು ಮೂಳೆಗೆ ಗಾಯವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Related posts

ರೈಲಿನಲ್ಲಿ ನಿಗೂಢ ಅಸ್ವಾಭಾವಿಕ ವರ್ತನೆ ತೋರಿದ ವ್ಯಕ್ತಿ! ಕೆಲವೇ ಕ್ಷಣದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ!

ಕ್ರಿಕೆಟಿಗ ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಏನಾಯ್ತು? ಕಾಡ್ತಿದ್ಯಾ ಅನಾರೋಗ್ಯ?ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ನಿಜವೇ?

ಚಹಾ ಕಾಫಿಯ ಜೊತೆ ರಸ್ಕ್ ತಿನ್ನುವ ಅಭ್ಯಾಸ ನಿಮಗಿದೆಯೇ? ಆ ರಸ್ಕ್ ಅನ್ನು ಹೇಗೆ ತಯಾರಿಸುತ್ತಾರೆ ಗೊತ್ತಾ?ವಿಡಿಯೋ ಇಲ್ಲಿದೆ ನೋಡಿ..