ರಾಜ್ಯ

ಮಾಜಿ ಮುಖ್ಯಮಂತ್ರಿ ಎಸ್ .ಎಂ. ಕೃಷ್ಣ ಇನ್ನಿಲ್ಲ, ಕಳಚಿ ಬಿದ್ದ ರಾಜಕೀಯ ಕ್ಷೇತ್ರದ ಹಿರಿಯ ಕೊಂಡಿ

ನ್ಯೂಸ್ ನಾಟೌಟ್: ಮುಖ್ಯಮಂತ್ರಿ ಸೋಮನಹಳ್ಳಿ, ಮಲ್ಲಯ್ಯ ಕೃಷ್ಣ (S.M.Krishna) ಅವರು ಮಂಗಳವಾರ (ಡಿ.10) ನಸುಕಿನ 2.45ರ ಸುಮಾರಿಗೆ ಅಸುನೀಗಿದ್ದಾರೆ.

1932ರ ಮೇ 1ರಂದು ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ಜನಿಸಿದ ಎಸ್.ಎಂ.ಕೃಷ್ಣ ಅವರು ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢ ಶಿಕ್ಷಣ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ತಮ್ಮ ಬ್ಯಾಚುಲರ್ ಆಫ್ ಆರ್ಟ್ಸ್, ಯೂನಿವರ್ಸಿಟಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಸದರ್ನ್ ಮೆಥೋಡಿಸ್ಟ್ ವಿಶ್ವವಿದ್ಯಾಲಯ ಮತ್ತು ವಾಷಿಂಗ್ಟನ್ ಡಿಸಿಯ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದ ಲಾ ಸ್ಕೂಲ್​ನಿಂದಲೂ ಪದವಿ ಪಡೆದಿದ್ದರು.

ಅವರ ಅಧಿಕಾರಾವಧಿಯಲ್ಲಿ ಐಟಿ ಕ್ಷೇತ್ರಕ್ಕೆ ನೀಡಿದ ಉತ್ತೇಜನವಾಗಿ ಬೆಂಗಳೂರನ್ನು ಜಾಗತಿಕ ಭೂಪಟದಲ್ಲಿ ಮಿನುಗಿಸಿದ್ದಕ್ಕಾಗಿ ಅವರು ಹೆಚ್ಚು ಪ್ರಸಿದ್ದಿ ಪಡೆದರು. ಇದರ ಪರಿಣಾಮವಾಗಿ ಬೆಂಗಳೂರು ನಗರವು ಭಾರತದ ‘ಸಿಲಿಕಾನ್ ವ್ಯಾಲಿ’ ಆಗಿ ಬೆಳೆಯುತ್ತಿದೆ.
ಕಳೆದ ವರ್ಷ ಜನವರಿಯಲ್ಲಿ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿ ಘೋಷಿಸಿದರು. ಈ ವೇಳೆ ತಮ್ಮ ವಯಸ್ಸನ್ನು ಕಾರಣವೆಂದು ಉಲ್ಲೇಖಿಸಿದ್ದರು.

Related posts

ರಸ್ತೆ ಬದಿಯಲ್ಲಿದ್ದ ಕಾರಿನ ಮೇಲೆ ಉರುಳಿಬಿದ್ದ ಟೊಮ್ಯಾಟೊ ಸಾಗಿಸುತ್ತಿದ್ದ ಲಾರಿ..! ಅವಘಡದ ರಭಸಕ್ಕೆ ಅಪ್ಪಚ್ಚಿಯಾದ ಕಾರು, ಮೂವರ ಸಾವು

ಮದುವೆ ವಯಸ್ಸಲ್ಲಿ ಮನೆ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ ಯುವತಿಯರು..! ಒಬ್ಬಳು ಸೈಕಾಲಜಿ ಪದವೀಧರೆ ಇನ್ನೊಬ್ಬಳು ಎಲ್.ಎಲ್.ಬಿ ಪದವೀಧರೆ..! ಈ ನಿರ್ಧಾರಕ್ಕೆ ಕಾರಣವೇನು..?

ಕರ್ನಾಟಕದ ಬಡ ವೆಲ್ಡರ್ ಕಾರ್ಮಿಕನ ಮಗ ಕೌನ್ ಬನೇಗಾ ಕರೋಡ್ ​ಪತಿಯಲ್ಲಿ 50 ಲಕ್ಷ ಗೆದ್ದ, ಬಾಗಲಕೋಟೆಯ ಬಡ ಯುವಕ ಸಾಧನೆ