ಕ್ರೈಂವೈರಲ್ ನ್ಯೂಸ್

ಚಲಿಸುತ್ತಿದ್ದ ರೈಲಿನಲ್ಲಿ ಹಲವರಿಗೆ ಚಾಕು ಇರಿತ..! ಓರ್ವ ಮೃತ್ಯು, ಈ ಬಗ್ಗೆ ಅಧಿಕಾರಿಗಳು ಹೇಳಿದ್ದೇನು..?

ನ್ಯೂಸ್ ನಾಟೌಟ್: ಚಲಿಸುತ್ತಿದ್ದ ರೈಲಿನಲ್ಲಿ ಮುಸುಕುಧಾರಿ ವ್ಯಕ್ತಿಯೊಬ್ಬ ಹಲವರಿಗೆ ಹಲ್ಲೆ ಮಾಡಿದ ಘಟನೆ ಖಾನಾಪುರ ತಾಲೂಕಿನ ಲೋಂಡಾ ಬಳಿ ನಡೆದಿದೆ. ಗಾಯಾಳುಗಳ ಆರೋಗ್ಯವನ್ನು ರೈಲ್ವೆ ಡಿಐಜಿ ಶರಣಪ್ಪ ವಿಚಾರಿಸಿದ್ದಾರೆ. ಡಿಐಜಿ ಮಾತನಾಡಿ, ಐಪಿಸಿ ಸೆಕ್ಷನ್ 302, 307, 332, 353 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪುದುಚೇರಿ ದಾದರ್ ಎಕ್ಸ್​ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ ಎಂದಿದ್ದಾರೆ.

ಅನಾಮಿಕ ಪ್ರಯಾಣಿಕ ಟಿಕೆಟ್ ವಿಚಾರಕ್ಕೆ ಟಿಟಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಅವರ ಸಹಾಯಕ್ಕೆ ಬಂದ ಕೋಚ್ ಹೆಲ್ಪಿಂಗ್ ಸ್ಟಾಫ್​​ ಮೇಲೆಯೂ ಹಲ್ಲೆ ಆಗಿದೆ. ಆ ಪೈಕಿ ಓರ್ವ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ರೈಲ್ವೆ ಇಲಾಖೆಯೊಂದಿಗೆ ಮಾತನಾಡಿದ್ದೇವೆ. ಮೃತನ ಕುಟುಂಬಕ್ಕೆ ರೈಲ್ವೆ ಇಲಾಖೆಯಿಂದ ಪರಿಹಾರ ನೀಡಲಾಗುತ್ತಿದೆ. ದೇವರ್ಷಿ ವರ್ಮಾ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದ ಡಿಐಜಿ ಶರಣಪ್ಪ, ಹಲ್ಲೆ ಮಾಡಿದ ಆರೋಪಿ ಪತ್ತೆಗೆ ಆರ್​ಪಿಎಫ್, ಜಿಆರ್​ಪಿ ಮತ್ತು ಸ್ಥಳೀಯ ಪೊಲೀಸ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ.

ನಾಲ್ಕು ವಿಶೇಷ ತಂಡಗಳನ್ನು ಈಗಾಗಲೇ ರಚನೆ ಮಾಡಲಾಗಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು. ನಮ್ಮ ರಾಜ್ಯದಲ್ಲಿ ದಿನಕ್ಕೆ 1,400 ರೈಲುಗಳು ಓಡಾಡುತ್ತವೆ. ಆದರೆ, ನಮ್ಮ ಸಿಬ್ಬಂದಿ ಇರೋದು ಕೇವಲ 830 ಮಾತ್ರ. ಒಂದ ಟ್ರೇನ್‌ಗೆ ಒಬ್ಬ ಸಿಬ್ಬಂದಿಯನ್ನೂ ಹಾಕಲು ಆಗದ ಪರಿಸ್ಥಿತಿ ಇದೆ. ಹಾಗಾಗಿ, ಕ್ರೈಂ ಹಾಗೂ ಸೂಕ್ಷ್ಮ ಪ್ರದೇಶಗಳ ಆಧಾರದ ಮೇಲೆ ಸಿಬ್ಬಂದಿಯನ್ನು ನಿಯೋಜನೆ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Click 👇

https://newsnotout.com/2024/05/hindu-conversion-issue-india-and-pak
https://newsnotout.com/2024/05/ksrtc-and-women-bus-issue-at-bengaluru

   

https://newsnotout.com/2024/05/hanging-issue-news-and-hotel-protest

Related posts

ರಸ್ತೆ ಮಧ್ಯೆ ಹೊತ್ತಿ-ಉರಿದ ಕಾರು..! 1 ಗಂಟೆಗಳ ಕಾಲ ಬಂಟ್ವಾಳ- ಮೂಡುಬಿದಿರೆ ರಸ್ತೆ ಸಂಚಾರ ಸ್ಥಗಿತ

ಬಿಜೆಪಿ ಶಾಸಕನ ಬಾಮೈದನ ಮನೆಯಿಂದ ವಜ್ರಾಭರಣ ಕಳವು, 2 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳ ಕಳ್ಳತನ

ಕರ್ನಾಟಕದಲ್ಲಿ ವರ್ಷದ ಮೊದಲ ಕೇಸ್ ಪತ್ತೆ..! ಕೇರಳದ ಕೊರೊನಾ ರೂಪಾಂತರಿ ಕರ್ನಾಟಕಕ್ಕೂ ಬಂತಾ? ಕೋವಿಡ್ ಪತ್ತೆಯಾದದ್ದೆಲ್ಲಿ?