ದೇಶ-ಪ್ರಪಂಚದೇಶ-ವಿದೇಶರಾಜಕೀಯವೈರಲ್ ನ್ಯೂಸ್

ಪ್ರಯಾಗ್‌ರಾಜ್‌ ನಲ್ಲಿ ಮೋದಿಗಾಗಿ ತೃತೀಯ ಲಿಂಗಿಗಳಿಂದ ಮಹಾಯಜ್ಞ..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಬೇಕು, ದೇಶಕ್ಕಾಗಿ ಮತ್ತೆ ಪ್ರಧಾನಿ ಮೋದಿ ಎಂಬ ಉದ್ದೇಶದಿಂದ ತೃತೀಯ ಲಿಂಗಿಗಳು ಉತ್ತರ ಪ್ರದೇಶದ ಪ್ರಸಿದ್ದ ಯಾತ್ರಾಸ್ಥಳ, ಗಂಗಾ ನದಿ ತಟದ ಪ್ರಯಾಗ್‌ರಾಜ್‌ ನಲ್ಲಿ ವಿಶೇಷ ಪೂಜೆ, ಹೋಮಗಳನ್ನು ನಡೆಸುತ್ತಿದ್ದಾರೆ. ಉತ್ತರ ಪ್ರದೇಶದ ಎಂಬತ್ತು ಸ್ಥಾನಗಳಿಗೆ ಎಲ್ಲಾ ಏಳು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೋದಿ ಸ್ಪರ್ಧಿಸುತ್ತಿರುವ ವಾರಣಾಸಿಯಲ್ಲಿ ಕೊನೆಯ ಹಂತದ ಚುನಾವಣೆಯ ದಿನವಾದ ಜೂನ್ 1 ರಂದು ನಡೆಯಲಿದೆ.

ತೃತೀಯ ಲಿಂಗಿಗಳ ಆಖಾಡದ ಮಹಾಮಂಡಲೇಶ್ವರ ಮತ್ತು ಉತ್ತರ ಪ್ರದೇಶ ತೃತೀಯ ಲಿಂಗಿಗಳ ಕಲ್ಯಾಣ ಮಂಡಳಿಯ ಸದಸ್ಯೆ ಕೌಸಲ್ಯಾ ನಂದ್ ಗಿರಿ ಈ ಮಹಾಯಜ್ಞವನ್ನು ನಡೆಸಿದ್ದಾರೆ. ಪೂಜೆಯ ನಂತರ ಮೋದಿಯ ಭಾವಚಿತ್ರಕ್ಕೆ ತಿಲಕ ಇರಿಸಿ, ಆರತಿ ಬೆಳಗಿದ್ದಾರೆ ಎನ್ನಲಾಗಿದೆ. ಬುಧವಾರ (ಮೇ 1), ನಡೆದ ಈ ಮಹಾಯಜ್ಞದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಟೀನಾ ಮಾ, ” ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಬೇಕೆಂದು ಪ್ರಾರ್ಥನೆ ಮಾಡಲಾಯಿತು ” ಎಂದು ಹೇಳಿದ್ದಾರೆ. ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿಯವರು ಮತ್ತೆ ಪ್ರಧಾನಮಂತ್ರಿ ಆಗಬೇಕು. ಈ ನಿಟ್ಟಿನಲ್ಲಿ ಯಾವುದೇ ಅಡ್ಡಿಆತಂಕ ಎದುರಾಗದೇ ಇರಲಿ, ಭಗವಂತ ನಮ್ಮ ದೇಶಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಮಹಾಯಜ್ಞವನ್ನು ನಡೆಸಲಾಗಿದೆ ಎಂದು ಟೀನಾ ಮಾ ಹೇಳಿದ್ದಾರೆ.

Related posts

ಮುಲಾಯಂ ಸಿಂಗ್ ಯಾದವ್ ಸೊಸೆ ಬಿಜೆಪಿಗೆ ಸೇರ್ಪಡೆ..!

ದೆಹಲಿಗೆ ನೂತನ ಸಿಎಂ ಹೆಸರು ಪ್ರಸ್ತಾಪಿಸಿದ ಕೇಜ್ರಿವಾಲ್‌..! ಅತಿಶಿ ರಾಷ್ಟ್ರ ರಾಜಧಾನಿಗೆ ಹೊಸ ಮುಖ್ಯಮಂತ್ರಿ..!

ಸಿಎಂ ಮುಂದೆ 6 ನಕ್ಸಲರು ಶರಣಾಗತಿ, ಸಿದ್ದರಾಮಯ್ಯ ಜೊತೆ ನಕ್ಸಲರ ಸಭೆ..!