ನ್ಯೂಸ್ ನಾಟೌಟ್: ಮಂಗಳೂರಿನಲ್ಲಿ ಗುರುವಾರ ಅನ್ಯಕೋಮಿನ ಯುವತಿ ಜೊತೆ ಬಸ್ ನಲ್ಲಿ ಪ್ರಯಾಣಿಸಿದ ಯುವಕನ ಮೇಲೆ ಮಾರಾಮಾರಿ ಹಲ್ಲೆ ನಡೆದಿತ್ತು. ರಶೀಂ ಎಂಬಾತ ಕಾರ್ಕಳದ ನಿಟ್ಟೆಯಿಂದ ತನ್ನ ಸಹಪಾಠಿ ಯುವತಿಯ ಜೊತೆಗೆ ಅಗಮಿಸುತ್ತಿದ್ದಾಗ ನಂತೂರು ಸರ್ಕಲ್ ಬಳಿ ಏಕಾಏಕಿ ಬಸ್ ಅಡ್ಡಗಟ್ಟಿ ಒಳನುಗ್ಗಿದ ತಂಡ, ಬಸ್ಸಿನಿಂದ ಕೆಳಕ್ಕೆ ಇಳಿಸಿ ಹಲ್ಲೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಕದ್ರಿ ಠಾಣಾ ಪೊಲೀಸರು ಮೂವರನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ. ಮುತ್ತು(18), ಪ್ರಕಾಶ್(21) ಮತ್ತು ರಾಕೇಶ್(23) ಬಂಧಿತರು. ಈ ಮೂವರೂ ಹಿಂದೂ ಸಂಘಟನೆಯವರು ಎಂದು ಹೇಳಲಾಗಿದೆ.
previous post