ಕರಾವಳಿಕ್ರೈಂಮಂಗಳೂರು

ಮಂಗಳೂರು: ಸಿಬಿಐ ಅಧಿಕಾರಿಯ ಹೆಸರಿನಲ್ಲಿ ಬಂತು ಕರೆ, ಹೆದರಿ 31,12,000 ರೂ. ಕಳೆದುಕೊಂಡ ವ್ಯಕ್ತಿಯಿಂದ ಪೊಲೀಸ್ ದೂರು ದಾಖಲು

ನ್ಯೂಸ್ ನಾಟೌಟ್: ಸಿಬಿಐ ಅಧಿಕಾರಿಯ ಹೆಸರಿನಲ್ಲಿ ಕರೆ ಮಾಡಿ ಮಂಗಳೂರಿನ ವ್ಯಕ್ತಿಗೆ ಉಂಡೆನಾಮ ತಿಕ್ಕಿರುವ ಘಟನೆ ಮಂಗಳೂರಿನಿಂದ ವರದಿಯಾಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 31,12,000 ರೂ. ಕಳೆದುಕೊಂಡಿದ್ದಾರೆ. ಈ ಕುರಿತಂತೆ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಬಿಐ ಅಧಿಕಾರಿ ಹೆಸರಿನಲ್ಲಿ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ, ಬಂದ ಕರೆಯನ್ನು ನಂಬಿದ ಮಂಗಳೂರಿನ ವ್ಯಕ್ತಿಯೊಬ್ಬರು 31,12,000 ರೂ. ನೀಡಿದ್ದಾರೆ. ದೂರುದಾರರಿಗೆ ಕರೆ ಮಾಡಿದ ವ್ಯಕ್ತಿ ನಿಮ್ಮ ಹೆಸರಿನಲ್ಲಿ 2 ಸಿಮ್ ಚಾಲ್ತಿಯಲ್ಲಿದೆ. ಒಂದು ಸಿಮ್ ಮೂಲಕ ಕಾನೂನು ಬಾಹಿರ ಸಂದೇಶ ರವಾನೆಯಾಗಿದೆ. ಮುಂಬೈ ಅಗ್ರಿಪಾಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಗೆ ತತ್‌ಕ್ಷಣ ಠಾಣೆಗೆ ಬರುವಂತೆ ಕರೆ ಬಂದಿದೆ. ಅಕ್ರಮ ಹಣ ವರ್ಗಾವಣೆಯಲ್ಲಿ ಆಧಾರ್ ಕಾರ್ಡ್‌ ದುರ್ಬಳಕೆಯಾಗಿದೆ.

ಜೆಟ್‌ ಏರ್‌ವೇಸ್ ಮಾಲಕ ನರೇಶ್ ಗೋಯೆಲ್ ಮನೆಗೆ ದಾಳಿ ಮಾಡಿದಾಗ ಪತ್ತೆಯಾಗಿರುವ ಡೆಬಿಟ್ ಕಾರ್ಡ್‌ ನಿಮ್ಮ ಹೆಸರಿದೆ. ಮುಂಬೈನಲ್ಲಿ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ಖಾತೆ ತೆರೆದು ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗಿದೆ. ಈ ಖಾತೆಯಿಂದ ವಿದೇಶಗಳಿಗೆ ಅಕ್ರಮ ವರ್ಗಾವಣೆ ಮಾಡಲಾಗಿದೆ ಎಂದು ಭಯಪಡಿಸಿದ್ದಾನೆ. ಈ ಕೇಸ್‌ ಸರಿಪಡಿಸಲು ನಿಮ್ಮ ಎಲ್ಲ ಬ್ಯಾಂಕ್‌ ಖಾತೆಗಳ ಲ್ಲಿರುವ ಹಣವನ್ನು ನಾವು ನೀಡುವ ಬ್ಯಾಂಕ್‌ ಖಾತೆಗೆ ವರ್ಗಾಯಿಸುವಂತೆ ತಿಳಿಸಿದ್ದಾನೆ. ಇದನ್ನೆಲ್ಲ ನಂಬಿದ ವ್ಯಕ್ತಿ ಅ.19ರ ತನಕ ವಿವಿಧ ಬ್ಯಾಂಕ್‌ಗಳಲ್ಲಿದ್ದ ಒಟ್ಟು 31,12,000 ರೂ. ವರ್ಗಾಯಿಸಿದ್ದಾರೆ. ಬಳಿಕ ಸಂಶಯ ಬಂದು ಮನೆಯವರಿಗೆ ತಿಳಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಹಣವನ್ನು ವಿವಿಧ ಬ್ಯಾಂಕ್‌ ಖಾತೆಗೆ ವರ್ಗಾಯಿಸಿ ಮೋಸ ಮಾಡಿದ ಆರೋಪಿಗಳಾದ ಸಂದೀಪ್‌ ರಾವ್‌, ಸಂಜನಾ ಹಾಗೂ ನವೋಜೋತ್ ಸಿಮಿ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

Click

https://newsnotout.com/2024/10/bigboss-kannada-radha-hiregowda-kannada-news-viral-task/
https://newsnotout.com/2024/10/lawyer-jagadeesh-in-another-program-kannada-news-colors/
https://newsnotout.com/2024/10/brain-dead-kannada-news-viral-news-opration-theatre-doctor/
https://newsnotout.com/2024/10/life-hole-kannada-news-kannamangala-milk-dairy-viral-news/

Related posts

ಮಡಿಕೇರಿ:ದ್ವಿಚಕ್ರ ವಾಹನ ಢಿಕ್ಕಿಯಾಗಿ ದುರಂತ ಅಂತ್ಯ ಕಂಡ ಸವಾರ,ಮೂರು ದಿನವಾದರೂ ಇನ್ನೂ ಪತ್ತೆಯಾಗದ ವಾರಿಸುದಾರರು..!

ಬಲಿಪ ಪ್ರಸಾದ್ ಭಾಗವತರು ಇನ್ನಿಲ್ಲ

ಸುಳ್ಯ ವಿಧಾನಸಭಾ ಕ್ಷೇತ್ರದ ಗಡಿಯಲ್ಲಿ 6 ಚೆಕ್‌ ಪೋಸ್ಟ್ ಸ್ಥಾಪನೆ! ದಕ್ಷಿಣ ಕನ್ನಡ- ಕೊಡಗು ಗಡಿಗಳಲ್ಲೂ ತಪಾಸಣೆ ಜೋರು!