ನ್ಯೂಸ್ ನಾಟೌಟ್: ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ಭತ್ತದ ಗದ್ದೆಯಲ್ಲಿ ಬುಧವಾರ(ಡಿ.4) ತುರ್ತು ಭೂಸ್ಪರ್ಶ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ಗೋವಿಂದಪುರ ಪೊಲೀಸ್ ಠಾಣಾ ಪ್ರದೇಶದ ಅರ್ಮದಾ ಗ್ರಾಮದಲ್ಲಿ ನೌಕಾಪಡೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿರುವುದರಿಂದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರಿಗೆ ಅಚ್ಚರಿ ಉಂಟಾಗಿದೆ.
ಹೆಲಿಕಾಪ್ಟರ್ ಅನ್ನು ಭೂಸ್ಪರ್ಶ ಮಾಡಿಸಿದ ಬಳಿಕ ಪೈಲಟ್ ಕೆಳಗಿಳಿದು ಪರಿಶೀಲನೆ ನಡೆಸಿದರು. ತಾಂತ್ರಿಕ ಸಮಸ್ಯೆ ನಿವಾರಣೆ ಆದ ಬಳಿಕ ಸುಮಾರು 30 ನಿಮಿಷಗಳ ನಂತರ ಹೆಲಿಕಾಪ್ಟರ್ ಮತ್ತೆ ಹಾರಾಟ ಆರಂಭಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
Click