Uncategorized

ಗಣೇಶೋತ್ಸವದ ಸದ್ದು ನಿಮಗೆ ಆಗುದಿಲ್ಲವೆಂದರೆ ನಾವು ದಿನಾ ಅಜಾನ್ ಕೇಳುವುದನ್ನು ಹೇಗೆ ಸಹಿಸಿಕೊಳ್ಳಬೇಕು ಎಂದ ಚಕ್ರವರ್ತಿ ಸೂಲಿಬೆಲೆ..! ಸಿದ್ದರಾಮಯ್ಯ ಮುಸ್ಲಿಮರಿಗೆ ಏನು ಬೇಕಾದ್ರೂ ಮಾಡಲು ಫ್ರೀ ಪಾಸ್ ಕೊಟ್ಟಿದ್ದಾರೆ ಎಂದ ಹಿಂದೂ ಮುಖಂಡ..!

ನ್ಯೂಸ್ ನಾಟೌಟ್: ಮಂಡ್ಯದ ಕೋಮು-ಗಲಬೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮುಸ್ಲಿಮರಿಗೆ ಫ್ರೀ ಪಾಸ್ ಕೊಟ್ಟಿದ್ದಾರೆ. ನಾವು ಏನು ಮಾಡಿದರೂ ಕರ್ನಾಟಕದಲ್ಲಿ ಬಚಾವ್ ಆಗಬಹುದು ಅನ್ನೋ ಮನಸ್ಥಿತಿಗೆ ಮುಸಲ್ಮಾನರು ಬಂದಿದ್ದಾರೆ ಎಂದು ಸಿಎಂ ವಿರುದ್ಧ ಹಿಂದೂ ಮುಖಂಡ, ಚಿಂತಕ ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ.

ಕರ್ನಾಟಕದಲ್ಲಿ ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಮುಸಲ್ಮಾನರಿಗೆ ಒಂದು ಥರ ಫ್ರೀಡಂ ಸಿಕ್ಕಿದೆ. ಹೀಗಾಗಿ ನಾವು ಕಲ್ಲು ಹೊಡೆದು ಬಚಾವ್ ಆಗಬಹುದು, ಮೂರ್ತಿ ಕೆಡವಿ ಬಚಾವ್ ಆಗಬಹುದು ಅಂದುಕೊಂಡಿದ್ದಾರೆ. ನಾಗಮಂಗಲದಲ್ಲಿ ಕಲ್ಲು ಎಸೆದಿರುವುದು ಇದೇ ಮನಸ್ಥಿತಿಯಲ್ಲಿ. ಗಣೇಶೋತ್ಸವ ಮಾಡೋದು ಹಿಂದೂಗಳು ಒಗ್ಗಟ್ಟಾಗಿ ಒಂದು ಕಡೆ ಸೇರಲಿ ಎಂದು. ನಿಮ್ಮ ದರ್ಗಾ, ಮಸೀದಿ ಎದುರು ಮೆರವಣಿಗೆ ಬರಬಾರದು ಎಂದರೆ ಯಾವ ನಿಯಮ ಇದು ಎಂದು ಪ್ರಶ್ನಿಸಿದ್ದಾರೆ.

ಇದು ಸ್ವತಂತ್ರ ಭಾರತ ಅವರವರ ಧಾರ್ಮಿಕ ಆಚರಣೆ ಮಾಡುವ ಅವಕಾಶವಿದೆ. ಗಣೇಶೋತ್ಸವ ಮೆರವಣಿ ಸದ್ದು ಮುಸ್ಲಿಮರಿಗೆ ಬೇಡ. ಆದರೆ ಪ್ರತೀ ದಿನ ಮಸೀದಿಗಳಿಂದ ಅಜಾನ್ ಕೇಳುತ್ತದೆ. ಅದನ್ನ ಹಿಂದೂಗಳು ಸಹಿಸಿಕೊಳ್ಳಬೇಕು. ಆದರೆ ಹನುಮ ಜಯಂತಿ, ಗಣೇಶೋತ್ಸವ ನಿಮಗೆ ಯಾಕೆ ಬೇಡ ಎಂದು ಪ್ರಶ್ನಿಸಿದರು.
ಮುಸ್ಲಿಂ ತರುಣರನ್ನು ಈ ಸರ್ಕಾರ ಬೆಂಬಲ ಮಾಡುವುದು ದುರಂತ. ಸಿದ್ದರಾಮಯ್ಯರಿಗೆ ಧೈರ್ಯ, ಸಾಮರ್ಥ್ಯ ಇದ್ದರೆ ಬುಲ್ಡೋಜರ್ ಪ್ರಕ್ರಿಯೆ ಮಾಡಿ. ಯೋಗಿ ಆದಿತ್ಯನಾಥ್ ರೀತಿ ಅವರ ಮನೆಗಳನ್ನು ಬುಲ್ಡೋಜರ್ ಮೂಲಕ ಉರುಳಿಸಿ ಎಂದಿದ್ದಾರೆ.

Click

https://newsnotout.com/2024/09/first-night-man-ask-adhar-with-girl-jain-caste-kannada-news-viral/
https://newsnotout.com/2024/09/kannada-news-school-girl-arrest-police-rajashekar-arrested/
https://newsnotout.com/2024/09/masjid-kannada-news-darga-of-muslim-and-ganesha-chaturti-issue/
https://newsnotout.com/2024/09/ganesha-chathurti-conflict-kannada-news-46-are-arrested-kannada-news-d/
https://newsnotout.com/2024/09/kannada-news-ayyappa-temple-onam-celebration-kannada-news/

Related posts

ಸಿಂಪಲ್, ಕ್ಯೂಟ್ ಕಿರುತೆರೆ ನಟಿ ಸಿರಿ ಬಿಗ್‌ ಬಾಸ್‌ ಬಗ್ಗೆ ಹೇಳಿದ್ದೇನು? ಉಡುಪು ಮತ್ತು ಸಂಭಾವನೆ ಬಗೆಗಿನ ಪ್ರಶ್ನೆಗೆ ಏನೆಂದು ಉತ್ತರಿಸಿದ್ದಾರೆ ಗೊತ್ತಾ?

ಪ್ರಧಾನಿ ಮೋದಿ ಬಂದ ಬಳಿಕ ಡಬ್ಬಲ್ ಆಯ್ತು ಬಂಡೀಪುರದ ಆದಾಯ..!ಆದಾಯದಲ್ಲಿ ರಾಜ್ಯದಲ್ಲಿಯೇ ನಂಬರ್ ಓನ್..!

ತಾಯಿಯಿಂದಲೇ ಮಗಳ ಅಪಹರಣವಾಯಿತೇ? ಏನಿದು ಹೃದಯ ವಿದ್ರಾವಕ ಘಟನೆ?