ಕ್ರೈಂ

ಊರುಬೈಲು: ರಬ್ಬರ್ ಟ್ಯಾಪಿಂಗ್ ಮುಗಿಸಿ ಬರುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿಗೆ ಯತ್ನ..! ಪವಾಡಸದೃಶ್ಯ ರೀತಿಯಲ್ಲಿ ವ್ಯಕ್ತಿ ಪಾರು, ಸಿಟ್ಟಿಗೆದ್ದ ಕಾಡಾನೆ ಮಾಡಿದ್ದೇನು ಗೊತ್ತಾ..?

ನ್ಯೂಸ್ ನಾಟೌಟ್: ರಬ್ಬರ್ ಟ್ಯಾಪಿಂಗ್ ಕೆಲಸ ಮುಗಿಸಿ ಶೆಡ್ ಗೆ ಬರುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿಗೆ ಯತ್ನಿಸಿರುವ ಘಟನೆ ಇಂದು (ಜು.೧೧) ಬೆಳಗ್ಗೆ 5 ಗಂಟೆಗೆ ನಡೆದಿದೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಊರು ಬೈಲು ಎಂಬಲ್ಲಿ ಘಟನೆ ಸಂಭವಿಸಿದೆ. ಪವಾಡಸದೃಶ್ಯ ರೀತಿಯಲ್ಲಿ ವ್ಯಕ್ತಿ ಪಾರಾಗಿದ್ದಾರೆ.

ಇಂದು ಬೆಳಗ್ಗೆ ಪಾಲ್ತಾಡಿ ಕೇಶವ ಅವರ ಮಗ ರವಿ ಅನ್ನುವವರು ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗಿದ್ದರು. ಈ ವೇಳೆ ತಮ್ಮ ಕೆಲಸ ಮುಗಿಸಿ ಇನ್ನೇನು ರಬ್ಬರ್ ಶೆಡ್ ಗೆ ಅವರು ಹೋಗಬೇಕು ಅನ್ನುವಷ್ಟರಲ್ಲಿ ಕಾಡಾನೆಯೊಂದು ಶೆಡ್ ಹಿಂದಿನಿಂದ ದಿಢೀರ್ ದಾಳಿಗೆ ಯತ್ನಿಸಿದೆ.

ಅದೃಷ್ಟವಶಾತ್ ರವಿ ಓಡಿ ತಪ್ಪಿಸಿಕೊಂಡಿದ್ದಾರೆ. ಇದೇ ವೇಳೆ ಕಾಡಾನೆ ರಬ್ಬರ್ ಶೆಡ್ ಅನ್ನು ಧ್ವಂಸ ಮಾಡಿದೆ. ಕಳೆದ ಹದಿನೈದು ದಿನದಿಂದ ಈ ಭಾಗದಲ್ಲಿ ಕಾಡಾನೆಯ ಹಾವಳಿ ಇದೆ, ಅರಣ್ಯ ಇಲಾಖೆಗೆ ಮನವಿ ಕೊಟ್ಟರೂ ಸರಿ ಆಗಿಲ್ಲವೆಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Related posts

ಸಂಸದ ತೇಜಸ್ವಿ ಸೂರ್ಯ ವಿರುದ್ಧ ಎಫ್.​ಐ.ಆರ್..! ರೈತನ ಆತ್ಮಹತ್ಯೆ ಬಗ್ಗೆ ಸುಳ್ಳು ಮಾಹಿತಿ ಹರಡಿದ ಆರೋಪ..!

ವಯನಾಡ್ ದುರಂತದಲ್ಲಿ 9 ಮಂದಿಯನ್ನು ಕಳೆದುಕೊಂಡಾಕೆಗೆ ಮತ್ತೊಂದು ಆಘಾತ..! ಮದುವೆಯಾಗಬೇಕಿದ್ದ ವರನೂ ಸಾವು..! ಇಲ್ಲಿದೆ ಮನಕಲಕುವ ಘಟನೆ..!

ಮಡಿಕೇರಿ ಕಂದಾಯ ಪ್ರದೇಶದಲ್ಲಿ ಸುಳ್ಯ ಅರಣ್ಯಾಧಿಕಾರಿಗಳ ದಾಂಧಲೆ, ಕೃಷಿಕನಿಗೆ ಜೀವ ಬೆದರಿಕೆ..!