ಕರಾವಳಿ

ವಯರಿಂಗ್ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ : ಯುವಕ ಗಂಭೀರ

ನ್ಯೂಸ್ ನಾಟೌಟ್ : ಯುವಕನೋರ್ವ ವಯರಿಂಗ್ ಕೆಲಸ ಮಾಡುತ್ತಿದ್ದ ವೇಳೆ ಹಠಾತ್ ಕರೆಂಟ್ ಶಾಕ್ ಹೊಡೆದು ಗಂಭೀರ ಗಾಯಗೊಂಡ ಘಟನೆ ನಡೆದಿದೆ.ಪುತ್ತೂರು ತಾಲೂಕಿನ ಕೆದಂಬಾಡಿ ಸ.ಹಿ.ಪ್ರಾ ಶಾಲೆಯಲ್ಲಿ ಡಿ.20ರಂದು ಈ ದುರ್ಘಟನೆ ಸಂಭವಿಸಿದ್ದು ಯುವಕ ಗಂಭೀರ ಗಾಯಗೊಂಡಿದ್ದಾನೆ.

ಏನಿದು ಘಟನೆ?


ಕೆದಂಬಾಡಿ ಸರ್ಕಾರಿ ಶಾಲೆಯೊಂದರಲ್ಲಿ ಪರ್ಪುಂಜ ನಿವಾಸಿ ಜಗದೀಶ್ ಯುವಕನು ವಯರಿಂಗ್ ಕೆಲಸ ಮಾಡುತ್ತಿದ್ದನು. ಏಣಿಯ ಮೂಲಕ ಸ್ಮಾರ್ಟ್ ಕ್ಲಾಸ್ ಕೋಣೆಗೆ ವಯರಿಂಗ್ ಮಾಡುತ್ತಿದ್ದ ವೇಳೆಗೆ ಹಠಾತ್ ಏಣಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಬಳಿಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Related posts

ತಮಿಳು ಸಿನಿಮಾದಲ್ಲಿ ನಟಿಸಲಿರುವ ರೂಪೇಶ್ ಶೆಟ್ಟಿ, ಖ್ಯಾತ ನಟ ಯೋಗಿ ಬಾಬು ಜೊತೆ ಕನ್ನಡ ಬಿಗ್ ​ಬಾಸ್ ವಿನ್ನರ್

ಗುಳಿಗ ದೈವವನ್ನು ಅವಮಾನಿಸಿದ ಆರಗ ಜ್ಞಾನೇಂದ್ರಗೆ ಸದ್ಬುದ್ಧಿ ಕೊಡು

ಬಜರಂಗದಳ ನಿ‍‍‍‍ಷೇಧ ಕುರಿತು ಕಾಂಗ್ರೆಸ್ ಗೆ ಹೆಚ್ ಡಿಕೆ ಪ್ರಶ್ನೆ? ಬಜರಂಗದಳ ನಿಷೇಧ ಪ್ರಣಾಳಿಕೆ ವಿಷಯವಾ? ಎಂದ ಕುಮಾರಣ್ಣ