ರಾಜಕೀಯರಾಜ್ಯವೈರಲ್ ನ್ಯೂಸ್

ಎಸ್ ​ಎಂ ಕೃಷ್ಣ ವಿವಾಹ ಆಮಂತ್ರಣ ಪತ್ರಿಕೆ ವೈರಲ್..! ಪ್ರೇಮ ವಿವಾಹವಾಗಿದ್ದ ಕರ್ನಾಟಕದ ಮಾಜಿ ಸಿಎಂ

ನ್ಯೂಸ್ ನಾಟೌಟ್: ಮಾಜಿ ವಿದೇಶಾಂಗ ಸಚಿವ, ಪದ್ಮ ವಿಭೂಷಣ, ಕರ್ನಾಟಕದ ಮಾಜಿ ಸಿಎಂ ಎಸ್​ಎಂ ಕೃಷ್ಣ ಮಂಗಳವಾರ(ಡಿ.10) ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರ ಇಂದು ಸಂಜೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಕಾಫಿ ಡೇ ಆವರಣದಲ್ಲಿ ನಡೆಯಲಿದೆ. ಬೆಂಗಳೂರಿನ ಸದಾಶಿವ ನಗರದ ನಿವಾಸದಿಂದ ರಸ್ತೆ ಮಾರ್ಗವಾಗಿ ಎಸ್​ಎಂ ಕೃಷ್ಣ ಅಂತಿಮ ಯಾತ್ರೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ, ಎಸ್ಎಂ ಕೃಷ್ಣ ಅವರ ವಿವಾಹದ ಆಮಂತ್ರಣ ಪತ್ರಿಕೆ ಈಗ ವೈರಲ್ ಆಗುತ್ತಿದೆ.

ಎಸ್ ​ಎಂ ಕೃಷ್ಣ 1966 ರಲ್ಲಿ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆಯ ಪ್ರೇಮರನ್ನು ವಿವಾಹವಾಗಿದ್ದರು. ಇವರಿಬ್ಬರ ವಿವಾಹ 1966 ರ ಏಪ್ರಿಲ್ 29 ರಂದು ಶಿವಮೊಗ್ಗ ನ್ಯಾಷನಲ್ ಹೈಸ್ಕೂಲ್​ನಲ್ಲಿ ನೆರವೇರಿತ್ತು.

‘‘ಸೋಮನಹಳ್ಳಿ ಎಸ್​​ಸಿ ಮಲ್ಲಯ್ಯನವರ ಕುಟುಂಬ ಮತ್ತು ಬಂಧು ವರ್ಗದವರು ತಾ 29-4-1966 ನೇ ಶುಕ್ರವಾರ ಶಿವಮೊಗ್ಗ ನ್ಯಾಷನಲ್ ಹೈಸ್ಕೂಲ್​ನಲ್ಲಿ ನಡೆಯುವ ಚಿರಂಜೀವಿ ಎಸ್​ಎಂ ಕೃಷ್ಣ (ದಿವಂಗತ ಎಸ್​​ಸಿ ಮಲ್ಲಯ್ಯನವರ ಪುತ್ರ) ಹಾಗೂ ಸೌಭಾಗ್ಯವತಿ ಪ್ರೇಮ (ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆಯ ಕೆಆರ್​ ಚನ್ನಪ್ಪಗೌಡರ ಪುತ್ರಿ) ಇವರುಗಳ ವಿವಾಹಕ್ಕೆ ತಾವು ದಯಮಾಡಿಸಿ ವಧೂವರರನ್ನು ಆಶೀರ್ವದಿಸಬೇಕಾಗಿ ಆಹ್ವಾನಿಸುತ್ತಾರೆ’’ ಎಂದು ಲಗ್ನಪತ್ರಿಕೆಯಲ್ಲಿ ಉಲ್ಲೇಖಿಸಲಾಗಿತ್ತು.

ಸದ್ಯ ಎಸ್​​ಎಂ ಕೃಷ್ಣ ವಿವಾಹದ ಆಮಂತ್ರಣ ಪತ್ರಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

Click

https://newsnotout.com/2024/12/mahakaali-worshing-kannada-news-uttar-pradesh-waranasi-d/
https://newsnotout.com/2024/12/kannada-news-3-days-tommorrow-public-holiday/
https://newsnotout.com/2024/12/social-media-misused-kannada-news-photos-viral-photo/
https://newsnotout.com/2024/12/murudeshwara-4-students-suspend-and-3-hospitalised/
https://newsnotout.com/2024/12/coma-kannada-news-viral-news-street-dogs-c/

Related posts

ಮಾನವನ ಮೂಳೆಯಿಂದ ಮಾದಕ ಪದಾರ್ಥ ತಯಾರಿ..! ಈ ದೇಶದಲ್ಲಿ ಸ್ಮಶಾನಗಳಿಗೆ ಕಾವಲು, ತುರ್ತುಪರಿಸ್ಥಿತಿ ಘೋಷಣೆ..!

ಮನೆಗೆ ಬಂದಪ್ಪಳಿಸಿದ ವಿಮಾನ! 14 ವರ್ಷದ ಬಾಲಕ ಸೇರಿ ಇಬ್ಬರು ಗಂಭೀರ!

ತಂಗಿ ಪರೀಕ್ಷೆಯಲ್ಲಿ ನಕಲು ಮಾಡಲು ಸಹಾಯಕ್ಕಾಗಿ ನಕಲಿ ಪೊಲೀಸ್‌ ಆಗಿ ಹೋದ ಅಣ್ಣ..! ಆತ ಸಿಕ್ಕಿ ಬಿದ್ದದ್ದೇ ವಿಚಿತ್ರ..!