ಕ್ರೈಂಬೆಂಗಳೂರುರಾಜಕೀಯರಾಜ್ಯ

14 ಸೈಟ್ ಗಳನ್ನು ಹಿಂದಿರುಗಿಸಲು ಸಿಎಂ ಸಿದ್ದರಾಮಯ್ಯ ಪತ್ನಿ ನಿರ್ಧಾರ..! ಮುಡಾ ಕೇಸ್‌ ನಲ್ಲಿ ಸಿಎಂ ವಿರುದ್ಧ ಎಫ್.ಐ.ಆರ್ ಆದ ಬಳಿಕ ಮಹತ್ವದ ಬದಲಾವಣೆ..!

ನ್ಯೂಸ್ ನಾಟೌಟ್: ಮುಡಾ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಸಿದ್ದರಾಮಯ್ಯ ಕಾನೂನು ಹೋರಾಟ ನಡೆಸುತ್ತಿರುವುದರ ಜೊತೆಗೆ ಮಹತ್ವದ ನಿರ್ಧಾರವನ್ನು ಮಾಡಿದ್ದಾರೆ.

ಒಂದೆಡೆ ಲೋಕಾಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಇತ್ತ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬರುತ್ತಿರುವ ಕಾರಣ ಜಾರಿ ನಿರ್ದೇಶನಾಲಯ(ಇಡಿ) ಮುಡಾ ಪ್ರಕರಣದ ಮಧ್ಯಪ್ರವೇಶಿದೆ. ಇಡೀ ಎಂಟ್ರಿ ಕೊಡುತ್ತಿದ್ದಂತೆ ಪ್ರಕರಣದ ಗಂಭೀರತೆ ಹಾಗೂ ವ್ಯಾಪ್ತಿ ವಿಸ್ತಾರಗೊಂಡಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಪತ್ನಿ ಪಾರ್ವತಿ ಇದೀಗ ಪಡೆದಿರುವ 14 ಸೈಟ್‌ಗಳನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ.

ಸೈಟ್ ಹಿಂದಿರುಗಿಸುವ ಕುರಿತು ಸಿದ್ದರಾಮಯ್ಯ ಪತ್ನಿ ಪಾರ್ವತಿ ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಸೈಟ್ ಪಡೆದಿರುವ ಹಾಗೂ ಇದೀಗ ಹಿಂದಿರುಗಿಸುತ್ತಿರುವ ಕಾರಣವನ್ನು ಪಾರ್ವತಿ ವಿವರಿಸಿದ್ದಾರೆ. ಆದರೆ ಮುಡಾ ಸೈಟ್‌ನಿಂದ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿಗೆ ಕಂಟಕ ಎದುರಾಗಿರುವ ಕಾರಣ ಸಿದ್ದರಾಮಯ್ಯ ಪತ್ನಿ ಪಾರ್ವತಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ನೋ ಮಾತಗಳು ಕೇಳಿಬಂದಿದೆ.

“ನನ್ನ ಪತಿಯಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 40 ವರ್ಷದ ಸುದೀರ್ಘ ರಾಜಕಾರಣದಲ್ಲಿ ಯಾವುದೇ ಸಣ್ಣ ಕಳಂಕವೂ ಅಂಟಿಕೊಳ್ಳದಂತಹ ನೈತಿಕತೆಯನ್ನು ವ್ರತದಂತೆ ಪಾಲಿಸಿಕೊಂಡು ಬಂದವರು. ರಾಜಕೀಯವೂ ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡು ಅವರಿಗೆ ಮುಜುಗರ ಉಂಟು ಮಾಡಬಾರದು ಎಂಬ ನಿರ್ಧಾರಕ್ಕೆ ಬದ್ಧಳಾಗಿ ಬದುಕಿದವಳು” ಎಂದು ಪತ್ರದಲ್ಲಿ ಇತರ ವಿಚಾರಗಳ ಜೊತೆ ತಿಳಿಸಲಾಗಿದೆ.

Click

https://newsnotout.com/2024/10/babies-nomore-kananda-news-children-k-viral-issue/
https://newsnotout.com/2024/10/fire-on-self-govinda-actor-of-bollywwod-kannada-news-gun/
https://newsnotout.com/2024/10/super-star-rajanikanth-kannada-news-hospitalized-76-year-old/
https://newsnotout.com/2024/10/uppinangady-fake-call-as-cbi-officer-kannada-news/

Related posts

ದೇವರಕೊಲ್ಲಿಯ ಅಬ್ಬಿಕೊಲ್ಲಿ ಬಳಿ ಕಾರು ಮತ್ತು ಪಿಕ್ ಅಪ್ ವಾಹನ ನಡುವೆ ಅಪಘಾತ..! ಕಾರಿನಲ್ಲಿದ್ದವರಿಗೆ ಗಾಯ..!

ಮಡಿಕೇರಿಯಲ್ಲಿ ಕಾಂಗ್ರೆಸ್ ಗೆ ಗೆಲುವು

ಆನೆಗೆ ಸ್ನಾನ ಮಾಡಿಸುವಾಗ ಕೆರೆಯಲ್ಲಿ ಮುಳುಗಿ ಕಾವಾಡಿಗ ಸಾವು..! ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ದುರ್ಘಟನೆ..!