ಕ್ರೈಂರಾಜಕೀಯ

ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಮತ ಚಲಾಯಿಸಲು ಬಂದಾಗ ಹಿಂಸಾಚಾರ..! ಟಿಎಂಸಿ ಕಾರ್ಯಕರ್ತನಿಂದ ದಾಳಿ..! ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್: ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಹಿಂಸಾಚಾರ, ಕೊಲೆ, ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡವೆ ಗಲಾಟೆ ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಮೂರನೇ ಹಂತದ ಮತದಾನದ ವೇಳೆಯೂ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಿದೆ. ಮುರ್ಷಿದಾಬಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಧನಂಜಯ್‌ ಘೋಷ್‌ ಮತ ಚಲಾಯಿಸಲು ಹೋದಾಗ ಈ ಗಲಾಟೆ ನಡೆದಿದೆ. ಮುರ್ಷಿದಾಬಾದ್‌ನಲ್ಲಿ ಧನಂಜಯ್‌ ಘೋಷ್‌ ಮತದಾನ ಮಾಡಲು ಹೋದಾಗ ಅವರನ್ನು ಬೂತ್‌ ಏಜೆಂಟ್‌ ಒಬ್ಬರು ತಡೆದಿದ್ದಾರೆ.

ಇದೇ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದು ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಗೆ ಕಾರಣವಾಗಿದೆ. “ನಾನೊಬ್ಬ‌ ಬಿಜೆಪಿ ಅಭ್ಯರ್ಥಿ. ನನಗೇ ಚುನಾವಣೆ ಏಜೆಂಟ್‌ ಒಬ್ಬ ಬಂದು ಬೆದರಿಕೆ ಹಾಕುತ್ತಾನೆ ಎಂದರೆ, ಸಾಮಾನ್ಯ ಜನರ ಗತಿ ಏನು? ಆತನ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲಾಗುವುದು” ಎಂದು ಧನಂಜಯ್‌ ಘೋಷ್‌ ತಿಳಿಸಿದ್ದಾರೆ. ಮುರ್ಷಿದಾಬಾದ್‌ ಲೋಕಸಭೆ ಕ್ಷೇತ್ರದ ರಾಬಿನಗರದಲ್ಲೂ ಗಲಾಟೆ ನಡೆದಿದೆ. ಕಾಂಗ್ರೆಸ್‌-ಎಡಪಕ್ಷದ ಜಂಟಿ ಅಭ್ಯರ್ಥೀ ಮೊಹಮ್ಮದ್‌ ಸಲೀಂ ಎಂಬುವರು ನಕಲಿ ಬೂತ್‌ ಏಜೆಂಟ್‌ ಒಬ್ಬನನ್ನು ಹಿಡಿದು ಹಾಕಿದ್ದಾನೆ ಎಂದಿದ್ದಾರೆ. ಇದಾದ ಬಳಿಕ, ಸಲೀಂ ವಿರುದ್ಧ ಗೋ ಬ್ಯಾಕ್‌ ಎಂಬ ಘೋಷಣೆ ಕೂಗಿದ್ದು, ನಂತರ ಗಲಾಟೆ ನಡೆದಿದೆ.

ಪಶ್ಚಿಮ ಬಂಗಾಳದಲ್ಲಿ 1 ಗಂಟೆ ಸುಮಾರಿಗೆ ಶೇ.49.27ರಷ್ಟು ಮತದಾನ ದಾಖಲಾಗಿದೆ. ಇನ್ನು, ಮಹಾರಾಷ್ಟ್ರದಲ್ಲಿ ಇದೇ ವೇಳೆಗೆ ಶೇ.31.55ರಷ್ಟು ಮತದಾನ ದಾಖಲಾಗಿದೆ.

Related posts

ಗುಜರಾತ್ ನ ಕಛ್ ನಲ್ಲಿ 3.2 ತೀವ್ರತೆಯ ಭೂಕಂಪನ..! ಭಾರತಕ್ಕೆ ಭೂಕಂಪದ ಆತಂಕ..!

ಪುತ್ತೂರು: ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಯುಪಿ ಫೈಯರ್ ಬ್ರ್ಯಾಂಡ್ ,ಬಜರಂಗದಳ ನಿ‍ಷೇಧ ದೇಶದ್ರೋಹಿ ಕೆಲಸ-ಯುಪಿ ಸಿಎಂ ಟೀಕಾಸ್ತ್ರ

ಮನೆ ಮುಂದಿರುವ ತುಳಸಿ ಕಟ್ಟೆಗಳು ಶಿಲುಬೆಗಳಾಗಿ ಬದಲಾಗುತ್ತಿವೆ ಎಂದದ್ದೇಕೆ ಬಿವೈ ರಾಘವೇಂದ್ರ..? ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆಗೆ ಸಂಸದರ ಆಕ್ರೋಶ!