ಕರಾವಳಿಸುಳ್ಯ

ಸುಬ್ರಹ್ಮಣ್ಯ: ಅಣ್ಣನಿಂದಲೇ ತಮ್ಮನ ಮೇಲೆ ಹಲ್ಲೆ ಆರೋಪ , ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

ನ್ಯೂಸ್ ನಾಟೌಟ್ : ಅಣ್ಣನೋರ್ವ ತಮ್ಮನಿಗೆ ಹಲ್ಲೆ ನಡೆಸಿದ ಘಟನೆ ಕಡಬ ತಾಲೂಕಿನ ರೆಂಜಿಲಾಡಿಯಿಂದ ವರದಿಯಾಗಿದೆ.ಈ ಪ್ರಕರಣ ಕಡಬ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು,ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೆಂಜಿಲಾಡಿ ಗ್ರಾಮದ ಗಂಗಾಧರ (36) ಎಂಬವವರು ಜ.13ರಂದು ಬೆಳಗ್ಗೆ ತನ್ನ ಮನೆಯ ಎದುರಿನಲ್ಲಿ ಬೆಳೆದಿರುವ ಕಳೆ ಹುಲ್ಲನ್ನು ತೆಗೆಯುತ್ತಿರುವಾಗ ಅವರ ಅಣ್ಣ ವಸಂತ ಎಂಬುವವರು ಅಲ್ಲಿಗೆ ಬಂದಿದ್ದರು.ಈ ವೇಳೆ ಹುಲ್ಲು ತೆಗೆಯುವ ವಿಚಾರದಲ್ಲಿ ತಕರಾರು ತೆಗೆದಿದ್ದಲ್ಲದೇ ಗಂಗಾಧರ ಹಾಗೂ ಅವರ ಪತ್ನಿಗೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Related posts

1 ವರ್ಷದ ಕಂದಮ್ಮ ಜತೆ ನದಿಗೆ ಹಾರಿ ತಾಯಿ ಆತ್ಮಹತ್ಯೆ; ಮಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ

ಸುಳ್ಯ:ಅಸೌಖ್ಯದಿಂದ ಬಳಲುತ್ತಿದ್ದ ಯುವಕ ಚಿಕಿತ್ಸೆ ಫಲಿಸದೇ ಮೃತ್ಯು

ಸುಬ್ರಹ್ಮಣ್ಯ:ಕುಮಾರಪರ್ವತ ಚಾರಣಕ್ಕೆ ಮತ್ತೆ ನಿರ್ಬಂಧ,ಕಾರಣಗಳೇನು?