Latest

ದೇಶದಲ್ಲಿನ ಇಷ್ಟೊಂದು ಸಮಸ್ಯೆಗೆ ತಾಯಂದಿರೇ ಕಾರಣ :ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅಸಮಾಧಾನವಾಗಿದ್ದೇಕೆ?!ವಿಡಿಯೋ ವೀಕ್ಷಿಸಿ

1.7k

ನ್ಯೂಸ್‌ ನಾಟೌಟ್: ಇಂದು ಬಹುತೇಕ ಹೆಣ್ಣುಮಕ್ಕಳು ಕೂದಲನ್ನು ಕಟ್ ಮಾಡಿಕೊಂಡು ಅದನ್ನು ಬಿಟ್ಟುಕೊಂಡು ತಿರುಗಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಜಡೆ ಕಟ್ಟುವುದು ಎನ್ನುವುದು ಈಗಿನವರಿಗೆ ಗೊತ್ತೇ ಇಲ್ಲ ಎನ್ನುವಷ್ಟರ ಮಟ್ಟಿಗೆ ತಲುಪಿದೆ. ಆದರೆ ಚಿಕ್ಕಮಕ್ಕಳಿಂದ ಹಿಡಿದು ವಯಸ್ಸಾಗಿ ಮಹಿಳೆಯರವರೆಗೂ  ಸಂಪೂರ್ಣ ಕೂದಲು ಬಿಟ್ಟು ತಿರುಗುವವರೇ ಹೆಚ್ಚು. ಒಟ್ಟಾರೆ ಅಲಂಕಾರದ  ಮಾತು ಬಂದಾಗ ಸಂಪೂರ್ಣ ಕೂದಲು ಬಿಟ್ಟು ತಿರುಗುವುದೂ ಮಹತ್ವ ಪಡೆದುಕೊಳ್ಳುತ್ತದೆ.

ಇದೀಗ ಈ ಬಗ್ಗೆ ಮಾತನಾಡಿರುವ ಖ್ಯಾತ ನಟಿ ಭಾರತಿ ವಿಷ್ಣುವರ್ಧನ್ ಅವರು ಕೂದಲು ಸಂಪೂರ್ಣ ಬಿಟ್ಟುಕೊಂಡು ತಿರುಗುವುದು ಸರಿಯಲ್ಲ ಎಂದು ಯುವತಿಯರಿಗೆ ಕಿವಿಮಾತು ಹೇಳಿದ್ದಾರೆ. ಕೂದಲು ಬಿಟ್ಟುಕೊಂಡು ತಿರುಗುವ ನಿಜವಾದ ಅರ್ಥ ಕಷ್ಟದಲ್ಲಿದ್ದೇವೆ ಎಂದು ತೋರಿಸಲು, ಮತ್ತೊಂದು ವಿಚಾರವೆಂದರೆ ಬೇರೆಯವರನ್ನು ಅಟ್ರಾಕ್ಟ್​ ಮಾಡಲು ಎಂದಿದ್ದಾರೆ. ದ್ರೌಪದಿ ತನ್ನ ಕಷ್ಟಕಾಲದಲ್ಲಿ ಇದ್ದ ಸಮಯದಲ್ಲಿ ಕೂದಲು ಬಿಟ್ಟಿದ್ದಳು. ದುಶ್ಯಾಸನನ ವಧೆ ಆಗುವವರೆಗೆ ಕೂದಲು ಕಟ್ಟಲ್ಲ ಎಂದು ಪ್ರತಿಜ್ಞೆ ಮಾಡಿದ್ದಳು. ಇದರ ಅರ್ಥ ಕಷ್ಟಕಾಲದಲ್ಲಿ ಹೆಣ್ಣುಮಕ್ಕಳು ಇದ್ದಾರೆ ಎನ್ನುವ ಅರ್ಥವನ್ನು ಕೂದಲು ಸಂಪೂರ್ಣ ಬಿಟ್ಟುಕೊಂಡು ತಿರುಗುವುದು ತೋರಿಸುತ್ತದೆ ಎಂದಿರುವ ನಟಿ, ನೀವು ಬೇರೆಯವರನ್ನು ಕೆಟ್ಟ ರೀತಿಯಲ್ಲಿ ಅಟ್ರಾಕ್ಟ್​ ಮಾಡುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ನಿಮ್ಮನ್ನು ನೀವು ಮೊದಲು ಪ್ರೀತಿಸಿ, ಬೇರೆಯವರನ್ನು ಅಟ್ರಾಕ್ಟ್​  ಮಾಡುವುದನ್ನು ನಿಲ್ಲಿಸಿ. ಇದು ಅಟ್ರಾಕ್ಟ್​ ಮಾತ್ರವಲ್ಲದೇ ನಿಮ್ಮ ಮೇಲೆ ಅಟ್ಯಾಕ್​ ಮಾಡಲೂ ನೀವು ಕಾರಣರಾಗುತ್ತೀರಿ ಎನ್ನುವುದು ನೆನಪಿನಲ್ಲಿ ಇರಲಿ ಎಂದಿದ್ದಾರೆ ನಟಿ ಭಾರತಿ ವಿಷ್ಣುವರ್ಧನ್​. ಬೇರೆಯವರನ್ನು ಹೀಗೆ ಪ್ರವೋಕ್​  ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿರೋ ಭಾರತಿ, ಮೊದಲು ನಿಮ್ಮನ್ನು ನೀವು ಗೌರವಿಸುವುದನ್ನು ಕಲಿತುಕೊಳ್ಳಿ, ಆಮೇಲೆ ಬೇರೆಯವರು ನಿಮ್ಮನ್ನು ಗೌರವಿಸುತ್ತಾರೆ ಎಂದಿದ್ದಾರೆ. 
 
ಅದೇ ಇನ್ನೊಂದೆಡೆ, ಜಡೆ ಮತ್ತು ಜ್ಞಾನದ ಬಗ್ಗೆ ಮಾತನಾಡಿರುವ ನಟಿ, ಕೂದಲಿನಲ್ಲಿ ಸರಸ್ವತಿ ಇದ್ದಾಳೆ. ಆಕೆಯನ್ನು ನೀವು ಕಟ್ಟಿಹಾಕಿಕೊಂಡರೆ ನಿಮ್ಮ ಜ್ಞಾನ ವರ್ಧಿಸುತ್ತದೆ. ಆದರೆ ಕೂದಲು ಬಿಟ್ಟು ಆಕೆಯನ್ನು ನೀವೇ ಹೊರಕ್ಕೆ ಕಳಿಸುತ್ತಿದ್ದೀರಿ ಎಂದಿದ್ದಾರೆ ಭಾರತಿ ಅವರು. ದೇಶದಲ್ಲಿ ಇಂದು ಎಷ್ಟೆಲ್ಲಾ ಸಮಸ್ಯೆ ಬರುತ್ತಿರುವುದಕ್ಕೆ ಕಾರಣ, ಇಂದು ತಾಯಂದಿರು ಕೂಡ ಕೂದಲು ಬಿಟ್ಟುಕೊಂಡು ತಿರುಗಾಡುವುದೇ ಆಗಿದೆ. ಜ್ಞಾನ ಎನ್ನುವುದು ಈಗ ದೂರವಾಗುತ್ತಿದೆ. ಯಾರು ನೋಡಿದರೂ ಕೂದಲು ಬಿಟ್ಟುಕೊಂಡು ಓಡಾಡುವವರೇ ಆಗಿದ್ದಾರೆ ಎಂದು ಭಾರತ ವಿಷಾದಿಸಿದ್ದಾರೆ. ಕೊನೆಯ ಪಕ್ಷ ಒಂದು ರಬ್ಬರ್​ ಅನ್ನಾದರೂ ಕಟ್ಟಿಕೊಳ್ಳಿ. ಸಂಪೂರ್ಣವಾಗಿ ಕೂದಲು ಬಿಡಬೇಡಿ ಎನ್ನುತ್ತಲೇ ಹೇಳುವುದನ್ನು ಹೇಳಿದ್ದೇನೆ. ಕೊನೆಗೆ ನಿಮ್ಮಿಚ್ಛೆ ಎಂದಿದ್ದಾರೆ. ಇದೇ ವೇಳೆ ತಾಯಂದಿರು ಕೂಡ ತಮ್ಮ ಮಕ್ಕಳಿಗೆ ಬುದ್ಧಿಹೇಳುವುದನ್ನು ಬಿಟ್ಟು ಫ್ಯಾಷನ್ ಹೆಸರಿನಲ್ಲಿ ಏನೆಲ್ಲಾ ಮಾಡಲು ಅವಕಾಶ ಕಲ್ಪಿಸುತ್ತಿದ್ದಾರೆ ಎನ್ನುವುದಕ್ಕೆ ನಟಿ ಬೇಸರಿಸಿದ್ದಾರೆ. ವಿದೇಶಿಗರು ಭಾರತೀಯ ಸಂಪ್ರದಾಯವನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದರೆ ನಾವು ಅಲ್ಲಿನ ಸಂಸ್ಕೃತಿಯನ್ನು ರೂಢಿಸಿಕೊಳ್ಳುತ್ತಿರುವುದು ನೋವಿನ ಸಂಗತಿ ಎಂದಿದ್ದಾರೆ. ಭಾರತಿ ಅವರ ವಿಡಿಯೋ ಅನ್ನು ಸುದ್ದಿಮನೆ ಆಫೀಷಿಯಲ್​ ಯೂಟ್ಯೂಬ್​ ಚಾನೆಲ್​ ಶೇರ್​ ಮಾಡಿಕೊಂಡಿದೆ. 

 

  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget