ನ್ಯೂಸ್ ನಾಟೌಟ್: ರೈತರ ಭೂ ಅಡಮಾನ ಮಾಡಲು ಕಾಲಾವಕಾಶ ನೀಡಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕರಾಗಿರುವ ಎ.ಎಸ್.ಪೊನ್ನಣ್ಣ ಅವರಿಗೆ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅನಂತ್ ಊರುಬೈಲು ಮನವಿ ಮಾಡಿದ್ದಾರೆ.
ತಮ್ಮ ಸಂಸ್ಥೆಯ ನಿರ್ದೇಶಕರು ಮತ್ತು ಊರಿನ ಪ್ರಮುಖರೊಂದಿಗೆ ತೆರಳಿ ಅವರು ಶಾಸಕರನ್ನು ಇತ್ತೀಚೆಗೆ ಭೇಟಿಯಾದರು. ರಾಜ್ಯ ಸರಕಾರದ ಆದೇಶದಂತೆ ಪ್ರಾ.ಕೃ.ಪ. ಸ. ಸಂಘಗಳಿಂದ ಕೆಸಿಸಿ ಸಾಲ ಹೊಂದಿರುವ ರೈತರು ತಮ್ಮ ಸಾಲಗಳಿಗೆ ಆಧಾರವಾಗಿ ತಮ್ಮ ಭೂಹಿಡುವಳಿಗಳನ್ನು ಅಡಮಾನ ಮತ್ತು ನಮೂನೆ 3 ದಾಖಲು ಮಾಡುವುದನ್ನು ಕಡ್ಡಾಯ ಮಾಡಿದ್ದನ್ನು ಶಾಸಕರು ತಡೆಹಿಡಿದು ರೈತರಿಗೆ ಕಾಲಾವಕಾಶ ಕೋಡಬೇಕಾಗಿ ಅನಂತ್ ಊರುಬೈಲು ಅವರು ಶಾಸಕರನ್ನು ಒತ್ತಾಯಿಸಿದರು.
ಸಂಸ್ಥೆಯ ನಿರ್ದೇಶಕ ದಿನೇಶ್ ಸಣ್ಣಮನೆ, ರಾಮಮೂರ್ತಿ ಉಂಬಳೆ, ಪ್ರಮುಖರಾದ ಸೂರಜ್ ಹೊಸೂರು, ರವಿರಾಜ್ ಹೊಸೂರು, ಆದಂ ಸೆಂಟ್ಯಾರ್, ಸುರೇಶ್. ಪಿ.ಎಲ್ ,ಹನೀಫ್ ಮುಂತಾದವರು ಉಪಸ್ಥಿತರಿದ್ದರು.