Uncategorized

ಚಂಬಲ್ ಕಣಿವೆಯ ಭಯಾನಕ ಡಕಾಯಿತರನ್ನೇ ಶರಣಾಗತಿ ಮಾಡಿಸಿದ್ದ ಗಾಂಧಿವಾದಿ ಇನ್ನಿಲ್ಲ

ಬೆಂಗಳೂರು: ಕರ್ನಾಟಕ ಮೂಲದ ಹಿರಿಯ ಗಾಂಧಿವಾದಿ ವೈದ್ಯ ಡಾ,ಎಸ್.ಎನ್.ಸುಬ್ಬರಾವ್ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ರಾಜಸ್ಥಾನದ ಎಸ್‌ಎಂಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಚಂಬಲ್ ಕಣಿವೆ ಡಕಾಯಿತರ ಶರಣಾಗತಿಯಲ್ಲಿ ವಿನೋಬಾ ಜೊತೆ ಮುಖ್ಯ ಪಾತ್ರ ವಹಿಸಿದ್ದರು. ನಾ.ಸು.ಹರ್ಡಿಕರ ಅವರ ಜೊತೆಗೆ ಸೇರಿ ಕಾಂಗ್ರೆಸ್ ಸೇವಾದಳ ಸಂಘಟಿಸಲು ದುಡಿದಿದ್ದರು. ವಿಶೇಷವಾಗಿ ಯುವಕರ ನಡುವೆ ಕೋಮುವಾದದ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದರು.

Related posts

ಮಡಿಕೇರಿ: ಒಂಟಿ ಮಹಿಳೆಯಿದ್ದ ಮನೆಗೆ ಕನ್ನ ಹಾಕಿ ದರೋಡೆ ಮಾಡುತ್ತಿದ್ದ ಖದೀಮನ ಹೆಡೆಮುರಿ ಕಟ್ಟಿದ ಮಡಿಕೇರಿ ಪೊಲೀಸರು, ಖತರ್ನಾಕ್‌ ಕಳ್ಳ ಸಿಕ್ಕಿ ಬಿದ್ದದ್ದೇಗೆ..?

ಮಡಿಕೇರಿ-ಮಂಗಳೂರು ರಸ್ತೆ ಸಂಚಾರಕ್ಕೆ ಮುಕ್ತ

ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ: 145 ವಿದ್ಯಾರ್ಥಿಗಳಿಗೆ 625/625 ಅಂಕ