ಕರಾವಳಿಸುಳ್ಯ

KSRTC ಕಾಂಟ್ರೆಕ್ಟ್ ಸಿಬ್ಬಂದಿಗೆ ವೇತನ ಪಾವತಿಸದೆ ಸತಾಯಿಸುತ್ತಿರುವ ಖಾಸಗಿ ಸಂಸ್ಥೆ, ಪುತ್ತೂರು, ಸುಳ್ಯ, ಮಡಿಕೇರಿ ಬಸ್ ನಿಲ್ಲಿಸಿ ಚಾಲಕ, ಕಂಡಕ್ಟರ್ ರಿಂದ ಪ್ರತಿಭಟನೆ

ನ್ಯೂಸ್ ನಾಟೌಟ್: ರಾಜ್ಯ ಸರ್ಕಾರದ ಅಧೀನದಲ್ಲಿರುವ ಕೆಎಸ್ ಆರ್ ಟಿಸಿ ಬಸ್ ಗೆ ಕಾಂಟ್ರಾಕ್ಟ್ ಬೇಸ್ ನಲ್ಲಿ ಡ್ರೈವರ್ ನೇಮಕ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಈ ಬಸ್ ಗಳು ಹೆಚ್ಚು ಸಂಚಾರ ನಡೆಸುತ್ತವೆ. ಇದೀಗ ಆ ಬಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸರಿಯಾಗಿ ವೇತನ ಪಾವತಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಈ ಕಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು ಹಾಗೂ ಕೊಡಗಿನ ಮಡಿಕೇರಿಯ ಬಸ್ ಸಿಬ್ಬಂದಿ ಶನಿವಾರ (ಸೆ.14) ಬಸ್ ನಿಲ್ಲಿಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಈ ಹಿಂದೆ ಸಿಬ್ಬಂದಿ ನೇಮಕದ ಕಾಂಟ್ರಾಕ್ಟ್ ಡೀಲ್ ಹೊಂದಿದ್ದ ಪನ್ನಗ ಎಂಬ ಸಂಸ್ಥೆ ಉದ್ಯೋಗಿಗಳಿಗೆ 23 ಸಾವಿರ ರೂ. ವೇತನ ನೀಡುತ್ತಿತ್ತು. ಆದರೆ ಇದೀಗ ಹೊಸದಾಗಿ ಕಾಂಟ್ರಾಕ್ಟ್ ಡೀಲ್ ಹೊಂದಿರುವ ಪೂಜಾಯ ಅನ್ನುವ ಸಂಸ್ಥೆ ಸಿಬ್ಬಂದಿಗೆ 16 ಸಾವಿರ ರೂ. ವೇತನ ನೀಡಿದೆ. ಕೆಲವರಿಗೆ ಇನ್ನೂ ವೇತನವೇ ನೀಡಿಲ್ಲ ಎಂಬ ಬಗ್ಗೆ ದೂರು ಕೇಳಿ ಬಂದಿದೆ. ಅಲ್ಲದೆ ಮೂರು ತಿಂಗಳಿನಿಂದ ಪಿಎಫ್ ಹಣವನ್ನು ಕೂಡ ಕಟ್ ಮಾಡಿ ಪಿಎಫ್ ಗೆ ಹಾಕಿಲ್ಲ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸುಳ್ಯ -ಕೊಯನಾಡು, ಸುಳ್ಯ – ಪುತ್ತೂರು ಹಾಗೂ ಮಡಿಕೇರಿ ಭಾಗದ ಬಸ್ ಗಳ ಪ್ರಯಾಣದಲ್ಲಿ ವ್ಯತ್ಯಯ ಕಂಡು ಬಂದಿದೆ. ಹಠಾತ್ ಸಿಬ್ಬಂದಿ ನಿರ್ಧಾರದಿಂದ ಪ್ರಯಾಣಿಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಯಿತು.

Related posts

ಅಶೋಕ್ ಕುಮಾರ್ ರೈ ಹಿಂದಿಕ್ಕುತವತ್ತ ಸಾಗಿದ ಪುತ್ತಿಲ, ಮಕಾಡೆ ಮಲಗುತ್ತಿರುವ ಬಿಜೆಪಿ..!

ಕಲ್ಲಡ್ಕ: ಶೌಚಾಲಯದ ತ್ಯಾಜ್ಯವನ್ನು ಕೇರಳದಿಂದ ಕರ್ನಾಟಕಕ್ಕೆ ತಂದು ಸುರಿಯುವ ದಂಧೆ..! ದುರ್ನಾತದ ಬೆನ್ನಲ್ಲೇ ಟ್ಯಾಂಕರ್ ಚಾಲಕನ ಬೆನ್ನಟ್ಟಿ ಹಿಡಿದ ಸಾರ್ವಜನಿಕರು

ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ (ರಿ) ಮಂಗಳೂರಿನ ಕಚೇರಿ ನವೀಕೃತಗೊಂಡು ಶುಭಾರಂಭ, ಹಲವಾರು ಗಣ್ಯರ ಆಗಮನ, ಶುಭ ಹಾರೈಕೆ