ಕರಾವಳಿ

ಮಕ್ಕಳ ದಾಹ ನೀಗಿಸಲೆಂದು ಅಜ್ಜಿ ತೋಡಿದ್ದ ಬಾವಿಯನ್ನೇ ಮುಚ್ಚಿದ ಅಧಿಕಾರಿಗಳು..!ರಾಜ್ಯವ್ಯಾಪಿ ವೈರಲ್ ಆಗಿದ್ದ ಅಜ್ಜಿಯ ನಿಸ್ವಾರ್ಥ ಸೇವೆಗೆ ಕೊನೆಗೂ ಫಲ ಸಿಗಲಿಲ್ಲ..!

143

ನ್ಯೂಸ್‌ ನಾಟೌಟ್‌ : ಫೆಬ್ರವರಿ ತಿಂಗಳು ಇನ್ನೂ ಮುಗಿದಿಲ್ಲ.ಈಗ್ಲೇ ನೀರಿನ ಸಮಸ್ಯೆ ತಲೆದೋರಿದೆ.ಹೀಗಾಗಿ  ಅಂಗನವಾಡಿ ಮಕ್ಕಳ ನೀರಿನ ದಾಹ ನೀಗಿಸಲು ಉತ್ತರ ಕನ್ನಡ ಜಿಲ್ಲೆ ಶಿರಸಿಯ ಗಣೇಶ ನಗರ ನಿವಾಸಿ 55 ವರ್ಷದ ಅಜ್ಜಿ ಗೌರಿ ನಾಯ್ಕ್ ಎಂಬುವವರು ಬಾವಿ ತೋಡಿದ ಘಟನೆಯನ್ನು ನೀವೆಲ್ಲಾ ಕೇಳಿರಬಹುದು.ವಿಪರ್ಯಾಸವೆಂದ್ರೆ ಅದೇ ಬಾವಿಯನ್ನು ಅಧಿಕಾರಿಗಳು ಮುಚ್ಚಿದ್ದಾರೆ ಎನ್ನುವ ಸುದ್ದಿ ಇದೀಗ ಹರಿದಾಡುತ್ತಿದೆ.

ಅಜ್ಜಿ ಬರೋಬ್ಬರಿ 20 ದಿನದಿಂದ ಬಾವಿ ತೋಡುತ್ತಿದ್ರು. ಇವರ ನಿಸ್ವಾರ್ಥ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿತ್ತು.ಇದರಿಂದ ಊರವರು ಭಾರಿ ಸಂತಸ ವ್ಯಕ್ತ ಪಡಿಸಿದ್ದರು. ಆದ್ರೆ, ಅಜ್ಜಿ ತೋಡಿದ್ದ 30 ಅಡಿ ಆಳದ ಬಾವಿಯನ್ನು ಅಧಿಕಾರಿಗಳು ಮುಚ್ಚಿದ್ದಾರೆ. ಹೀಗಾಗಿ ಅಜ್ಜಿ ಗೌರಿ ನಾಯ್ಕ ಕುಟುಂಬದವರು ಹಾಗೂ ಗ್ರಾಮಸ್ಥರು ಶಿರಸಿ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ತನಗೆ ಬಾವಿ ತೋಡಲು ಅವಕಾಶ ನೀಡಿ. ಇಲ್ಲವಾದ್ರೆ ಬಾವಿಯಲ್ಲಿ ಕುಳಿತು ಉಪವಾಸ ಸತ್ಯಾಗ್ರಹ ಮಾಡುವೆ ಎಂದು ಎಚ್ಚರಿಕೆ ನೀಡಿದ್ದಾರೆ.

55 ವರ್ಷದ ಗೌರಿನಾಯ್ಕ್ ಅವರು ಕಳೆದ 20 ದಿನದಿಂದ ಬಾವಿ ತೋಡುತ್ತಿದ್ದರು. ಅಂಗನವಾಡಿ ಕೇಂದ್ರದ ಮಕ್ಕಳಿಗೆ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಬಾವಿ ತೋಡುತ್ತಿದ್ರು. ಕಳೆದ 20 ದಿನದಿಂದ ಒಂದಲ್ಲ ಎರಡಲ್ಲ ಬರೋಬ್ಬರಿ 30 ಅಡಿ ಬಾವಿ ತೋಡಿದ್ರು. ಗೌರಿನಾಯ್ಕ್ ಅವರ ಕಾರ್ಯಕ್ಕೆ ರಾಜ್ಯಾದ್ಯಂತ ಶ್ಲಾಘನೆ ವ್ಯಕ್ತವಾಗಿತ್ತು. ಇನ್ನೂ ನಾಲ್ಕೈದು ದಿನ ಕಳೆದ್ರೆ ನೀರು ಬರ್ತಿತ್ತು. ಆದ್ರೆ, ಅಜ್ಜಿಯ ಕನಸು, ಮಕ್ಕಳ ದಾಹಕ್ಕೆ ಅಧಿಕಾರಿಗಳು ತಣ್ಣೀರೆರೆಚಿದ್ದಾರೆ.ಅಜ್ಜಿ ತೋಡಿದ್ದ ಬಾವಿಯನ್ನ ಹಲಗೆಯಿಂದ ಬಾವಿ ಮುಚ್ಚಿಹಾಕಿದ್ದಾರೆ.ದೇವರು ವರ ಕೊಟ್ರು ಪೂಜಾರಿ ಕೊಡಬೇಕಲ್ಲ, ಅನ್ನೋದು ಇದಕ್ಕೆ ಅನ್ಸುತ್ತೆ ಅಲ್ವ?

See also  ಮುಸ್ತಫಾ ಬೆಳ್ಳಾರೆಗೆ ಚಂದನ ಸೌರಭ ಪ್ರಶಸ್ತಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget