ಕ್ರೈಂವೈರಲ್ ನ್ಯೂಸ್

ಕಿವಿಮಾತು ಹೇಳಿದ ಪೊಲೀಸ್ ಪೇದೆಗೆ ಮಹಿಳೆ ಥಳಿಸಿದ್ದೇಕೆ? ಹೆಡ್ ಕಾನ್ ಸ್ಟೇಬಲ್ ನನ್ನು ದಾರಿ ಮಧ್ಯೆ ಕಾರಿನಿಂದ ಹೊರಗೆಳೆದು ದರ್ಪ ಮೆರೆದವರ್ಯಾರು?

ನ್ಯೂಸ್ ನಾಟೌಟ್ : ಮೂವರು ವ್ಯಕ್ತಿಗಳು ಪ್ರಯಾಣಿಸುತ್ತಿದ್ದ ಕಾರೊಂದು ದಿಲ್ಲಿಯ ಹೆಡ್ ಕಾನ್ ಸ್ಟೇಬಲ್ ಒಬ್ಬರ ವಾಹನದ ಮುಂಭಾಗಕ್ಕೆ ಢಿಕ್ಕಿ ಹೊಡೆದಿದ್ದು, ಆಗ “ವಾಹನವನ್ನು ಜಾಗರೂಕತೆಯಿಂದ ಚಲಾಯಿಸಿ” ಎಂದು ಕಿವಿಮಾತು ಹೇಳಿದ ಅವರಿಗೆ ಕಾರು ಪ್ರಯಾಣಿಕರು ಅಮಾನುಷವಾಗಿ ಥಳಿಸಿರುವ ಘಟನೆ ದಿಲ್ಲಿಯ ತಿಲಕ್ ನಗರದಲ್ಲಿ ವರದಿಯಾಗಿದೆ.

ಈ ಸಂಬಂಧ ದೂರು ದಾಖಲಿಸಿರುವ ದಿಲ್ಲಿ ಹೆಡ್ ಕಾನ್ ಸ್ಟೇಬಲ್ ಎಂ.ಜಿ.ರಾಜೇಶ್, ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ ಪ್ರಯಾಣಿಸುತ್ತಿದ್ದ ಕಾರು ನನ್ನ ಕಾರಿಗೆ ಢಿಕ್ಕಿ ಹೊಡೆಯಿತು. ಆಗ ನನ್ನ ಕಾರಿಗಾದ ಹಾನಿಯನ್ನು ಅವರಿಗೆ ತೋರಿಸಿ, ಅಜಾಗರೂಕತೆಯಿಂದ ವಾಹನ ಚಲಾಯಿಸಬೇಡಿ ಎಂದು ಕಿವಿಮಾತು ಹೇಳಿ ಮನೆಗೆ ತೆರಳಿದೆ ಎಂದು ತಿಳಿಸಿದ್ದಾರೆ.

ಮೂವರು ಪ್ರಯಾಣಿಕರೊಂದಿಗೆ ಕೊಂಚ ವಾಗ್ವಾದ ನಡೆಸಿದ ನಂತರ ನಾನು ಮನೆಯತ್ತ ಹೊರಟೆ. ಆದರೆ, ನನ್ನನ್ನು ಹಿಂಬಾಲಿಸಿದ ಅವರೆಲ್ಲ, ನನ್ನನ್ನು ದಾರಿ ಮಧ್ಯೆ ತಡೆದರು. ನಂತರ ಅವರೆಲ್ಲ ನನ್ನನ್ನು ಕಾರಿನಿಂದ ಹೊರಗೆಳೆದು, ಇಟ್ಟಿಗೆ ಹಾಗೂ ಕಬ್ಬಿಣದ ಸಲಾಕೆಯಿಂದ ಥ* ಳಿಸಿದರು ಹಾಗೂ ಕಾರನ್ನು ಜಖಂಗೊಳಿಸಿದರು ಎಂದು 50 ವರ್ಷ ವಯಸ್ಸಿನ ಅವರು ದೂರಿನಲ್ಲಿ ಹೇಳಿದ್ದಾರೆ.

ಆ ಅಮಾನುಷ ದಾಳಿಯಿಂದ ನಾನು ಪ್ರಜ್ಞಾಹೀನನಾದೆ ಎಂದೂ ರಾಜೇಶ್ ತಿಳಿಸಿದ್ದಾರೆ. “ನಮ್ಮ ತಂದೆಗೆ ಮಹಾರಾಜ ಅಗ್ರಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಪುತ್ರ ತಿಳಿಸಿದ್ದಾರೆ. ಪ್ರಕರಣದ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts

ಪುರಾತತ್ವ ಇಲಾಖೆಯ ಉತ್ಖನನದ ವೇಳೆ ಬೃಹತ್ ವಿಷ್ಣು ವಿಗ್ರಹ ಪತ್ತೆ..! ಈ ಬಗ್ಗೆ ಅಧಿಕಾರಿಗಳು ಹೇಳಿದ್ದೇನು..?

ಮಾರಕಾಯುಧಗಳಿಂದ ಹೊಡೆದು ಜೆಡಿಎಸ್ ಮುಖಂಡನ ಕೊಲೆ..! ಸ್ಥಳಕ್ಕೆ ಶ್ವಾನದಳ ಬೆರಳಚ್ಚು ತಜ್ಞರು ಭೇಟಿ ನೀಡಿ ತಪಾಸಣೆ

ಸಂಪಾಜೆ ದರೋಡೆ ಪ್ರಕರಣ: ಮನೆಯಲ್ಲಿ ಗಂಡಸರಿಲ್ಲದ ಮಾಹಿತಿ ಕೊಟ್ಟವರು ಯಾರು?