ಕ್ರೈಂವೈರಲ್ ನ್ಯೂಸ್

ಪೊಲೀಸರಿದ್ದ ಬಸ್ ಪ್ರಪಾತಕ್ಕೆ ಉರುಳಿದ್ದೇಗೆ..? 9 ಪೊಲೀಸರು ಗಂಭೀರ..!

ನ್ಯೂಸ್ ನಾಟೌಟ್ : ಬಸ್ ಅಪಘಾತದಲ್ಲಿ (Accident) 38 ರಾಜ್ಯ ರಿಸರ್ವ್ ಪೊಲೀಸ್ (ಎಸ್‍ಆರ್‌ಪಿ) ಸಿಬ್ಬಂದಿ ಗಾಯಗೊಂಡಿದ್ದು, ಅದರಲ್ಲಿ ಒಂಬತ್ತು ಮಂದಿಯ ಸ್ಥಿತಿ ಚಿಂತಾಜನಕವಾದ ಘಟನೆ ಗುಜರಾತ್‍ನ (Gujarat) ಪಂಚಮಹಲ್‍ನ ಗುಡ್ಡಗಾಡು ಪ್ರದೇಶದಲ್ಲಿ ನಡೆದಿದೆ.

ಗುಡ್ಡಗಾಡು ಪ್ರದೇಶದಲ್ಲಿ ಬಸ್ ಸಂಚರಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಬಸ್ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದೆ.

ಇದರಿಂದಾಗಿ ಹೆಚ್ಚಿನ ಜನರಿಗೆ ಗಾಯವಾಗಿದೆ. ಪೊಲೀಸರು (Police) ಪಾವಗಡದಲ್ಲಿ ಫೈರಿಂಗ್ ಅಭ್ಯಾಸ ಮುಗಿಸಿ ದಾಹೋದ್ ನಗರಕ್ಕೆ ಹಿಂದಿರುಗುತ್ತಿದ್ದರು ಎಂದು ತಿಳಿದುಬಂದಿದೆ

ಬಸ್ಸಿನಲ್ಲಿದ್ದ 50 ಜನ ಪೊಲೀಸರು ಪ್ರಯಾಣಿಸುತ್ತಿದ್ದರು. ಈ ಪೈಕಿ 38 ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದ 29 ಮಂದಿಯನ್ನು ಪ್ರಥಮ ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ. ಒಂಬತ್ತು ಮಂದಿ ತೀವ್ರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಡೋದರಾದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ವರದಿ ತಿಳಿಸಿದೆ.

Related posts

ಸಾವಿನ ನಂತರವೂ ಒಂದು ಬದುಕಿದೆ,ಇದರಲ್ಲಿ ಯಾವುದೇ ಸಂಶಯ ಬೇಡ..!,ಸಾವಿನ ನಂತರವೂ ಬದುಕಿದೆಯೇ?ಇದೇನಿದು ಸಂಶೋಧನಾ ವೈದ್ಯರೊಬ್ಬರ ಅಚ್ಚರಿಯ ಹೇಳಿಕೆ?

ಎಕ್ಸ್‌ ಪ್ರೆಸ್‌ ಪ್ಯಾಸೆಂಜರ್ ರೈಲ್ ಗೆ ಗೂಡ್ಸ್ ರೈಲು ಡಿಕ್ಕಿ..! 15 ಮಂದಿ ಸಾವು, 60 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ..!

ಕಡಬ ವ್ಯಾಪ್ತಿಯಲ್ಲಿ ನಕ್ಸಲರಿಗಾಗಿ ಕಾರ್ಯಾಚರಣೆ..! ಆ ಮನೆಗೆ ರಾತ್ರಿ ಶಸಾಸ್ತ್ರ ಹಿಡಿದು ನಕ್ಸಲರು ಬಂದದ್ದೇಕೆ..?