ಕರಾವಳಿಸಾಧಕರ ವೇದಿಕೆ

ಬಂಟ್ವಾಳ: ಏಕಾಂಗಿಯಾಗಿ 30ಅಡಿ ಆಳದ ಬಾವಿ ಕೊರೆದ ಪಿಯುಸಿ ವಿದ್ಯಾರ್ಥಿ! ಇಲ್ಲಿದೆ ಪಂಚಾಯತ್ ಗೆ ಮಾದರಿಯಾದ ಹುಡುಗನ ಕಥೆ!

230

ನ್ಯೂಸ್ ನಾಟೌಟ್ : ಪಂಚಾಯತ್ ನಿಂದ ಅಳವಡಿಸಿರುವ ನಳ್ಳಿಯಲ್ಲಿ ಸಮರ್ಪಕ ನೀರು ಬರುವುದಿಲ್ಲ ಎಂಬ ವಿಚಾರವನ್ನೇ ಸವಾಲಾಗಿ ಸ್ವೀಕರಿಸಿ ವಿದ್ಯಾರ್ಥಿಯೋರ್ವ ಏಕಾಂಗಿಯಾಗಿ ೩೦ ಅಡಿ ಆಳದ ಬಾವಿಯನ್ನು ಕೊರೆದ ಪ್ರಶಂಸನೀಯ ಸಂಗತಿ ಬಂಟ್ವಾಳ ತಾಲೂಕಿನ ನರಿಕೊಂಬಿ ಎಂಬಲ್ಲಿ ನಡೆದಿದೆ.

ಬಂಟ್ವಾಳದ ನರಿಕೊಂಬು ಗ್ರಾಮದ ನಾಯಿಲ-ಕಾಪಿಕ್ಕಾಡ್ ನಿವಾಸಿ ಲೋಕನಾಥ- ಮೋಹಿನಿ ದಂಪತಿಗಳ ಪುತ್ರ, ಪಿಯುಸಿ ವಿದ್ಯಾರ್ಥಿಯಾಗಿರುವ ಸೃಜನ್ ಬಾವಿ ಕೊರೆದ ವಿದ್ಯಾರ್ಥಿ ಎನ್ನಲಾಗಿದೆ. ಯಾರೊಬ್ಬರ ನೆರವನ್ನೂ ಪಡೆಯದೆ ಆಳದ ಮಣ್ಣನ್ನೂ ತಾನೊಬ್ಬನೇ ತೆಗೆದು ಸುಮಾರು 30 ಅಡಿ ಆಳದಲ್ಲಿ ಈ ಬಿರು ಬೇಸಗೆಯಲ್ಲೂ 3 ಅಡಿಯಷ್ಟು ನೀರನ್ನು ಪಡೆದಿರುವುದು ವಿಶೇಷ. ಬಿ.ಮೂಡ ಸರಕಾರಿ ಪ.ಪೂ.ಕಾಲೇಜಿನ ವಿದ್ಯಾರ್ಥಿ ಸೃಜನ್ ದ್ವಿತೀಯ ಪಿಯುಗೆ ತೇರ್ಗಡೆ ಹೊಂದಿದ್ದು, ಮನೆ ಮಂದಿ ನೀರಿಗಾಗಿ ಕಷ್ಟಪಡುವುದನ್ನು ಕಂಡು ಕೆಲವು ಸಮಯಗಳ ಹಿಂದೆಯೇ ಬಾವಿ ಕೊರೆಯಬೇಕು ಎಂದು ಹೇಳುತ್ತಿದ್ದ.

ಮನೆ ಮಂದಿ ಈತನ ಮಾತಿಗೆ ಸ್ಪಂದಿಸದಿದ್ದರೂ ಛಲ ಬಿಡದ ವಿದ್ಯಾರ್ಥಿ ಕೆಲ ಸಮಯಗಳ ಹಿಂದೆಯೇ ಬಾವಿಗಾಗಿ ಸಣ್ಣದಾದ ಹೊಂಡ ತೆಗೆದು ಸುಮ್ಮನಾಗಿದ್ದನು. ಪಿಯುಸಿ ಪರೀಕ್ಷೆ ಮುಗಿದ ತಕ್ಷಣವೇ ಅದೇ ಹೊಂಡವನ್ನು ಮುಂದುವರಿಸಿ ಆಳ ಮಾಡುತ್ತಲೇ ಹೋಗಿದ್ದಾನೆ. ಹೀಗೆ ಆಳವಾಗುತ್ತ ಹೋಗಿ ಸುಮಾರು 25 ಅಡಿ ಆಳದಲ್ಲಿ ನೀರು ಲಭಿಸಿದ್ದು ಬಾವಿಯಲ್ಲಿ ಬಹಳಷ್ಟು ನೀರು ತುಂಬಿಕೊಂಡಿದೆ. ಬಾವಿಯ ನೀರನ್ನು ಕಂಡು ಮನೆಯವರು, ಮಗನ ಸಾಧನೆಯನ್ನು ಮೆಚ್ಚಿಕೊಂಡಿದ್ದು. ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ.

See also  ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಉಗ್ರನ ಬಂಧನ..! ಕೀನ್ಯಾದಿಂದ ಬಂದವ ವಿಮಾನ ನಿಲ್ದಾಣದಲ್ಲಿ NIA ಬಲೆಗೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget