ಕ್ರೈಂದೇಶ-ಪ್ರಪಂಚ

ಸೊಳ್ಳೆ ಬತ್ತಿಯಿಂದ ಹೋಯಿತು ಆರು ಜನರ ಪ್ರಾಣ! ಸಂಶಯ ಮೂಡಿಸಿದ ನಿಗೂಢ ಸಾವಿನ ಹಿಂದಿದೆಯಾ ರೋಚಕ ಸ್ಟೋರಿ!

ನ್ಯೂಸ್ ನಾಟೌಟ್: ಉರಿಯುತ್ತಿದ್ದ ಸೊಳ್ಳೆ ಕಾಯಿಲ್ ಉರುಳಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದರಿಂದ ಉಸಿರುಗಟ್ಟಿ ಹಸುಗೂಸು ಸೇರಿದಂತೆ ಆರು ಜನರು ಸಾವಿಗೀಡಾದ ಘಟನೆ ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್‌ನಲ್ಲಿರುವ ಮನೆಯೊಂದರಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಶಾಸ್ತ್ರಿ ಪಾರ್ಕ್‌ನ ಮಾಚಿ ಮಾರ್ಕೆಟ ‌ನ ಮಜರ್ ವಾಲಾ ಎಂಬ ಹೆಸರಿನ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಉಪ ಪೊಲೀಸ್ ಆಯುಕ್ತ ಜಾಯ್ ಟಿರ್ಕಿ ಈ ಮಾಹಿತಿಯನ್ನು ತಿಳಿಸಿದ್ದಾರೆ.

ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಒಂಬತ್ತು ಜನರನ್ನು ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇವರಲ್ಲಿ ನಾಲ್ವರು ಪುರುಷರು, ಓರ್ವ ಮಹಿಳೆ ಹಾಗೂ ಒಂದೂವರೆ ವರ್ಷದ ಮಗು ಮೃತಪಟ್ಟಿದೆ ಎಂದು ವರದಿ ತಿಳಿಸಿದೆ.15 ವರ್ಷದ ಬಾಲಕಿ ಮತ್ತು 45 ವರ್ಷದ ವ್ಯಕ್ತಿ ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, 22 ವರ್ಷದ ಯುವಕನನ್ನು ಪ್ರಥಮ ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ರಾತ್ರಿ ವೇಳೆ ಸೊಳ್ಳೆಗಳಿಂದ ಮುಕ್ತಿ ಪಡೆಯಲು ಹಚ್ಚಿದ್ದ ಸೊಳ್ಳೆ ಬತ್ತಿಯು ಅಕಸ್ಮಾತ್ ಆಗಿ ಹಾಸಿಗೆಯ ಮೇಲೆ ಬಿದ್ದಿದೆ. ಇದರಿಂದ ಬೆಂಕಿ ಹಾಗೂ ದಟ್ಟ ವಿಷಕಾರಿ ಹೊಗೆಯಿಂದಾಗಿ ನಿವಾಸಿಗಳು ಪ್ರಜ್ಞೆ ಕಳೆದುಕೊಂಡು ಅಂತಿಮವಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

Related posts

ಜೇಡ ಮುಖಕ್ಕೆ ಕಚ್ಚಿ ಖ್ಯಾತ ಗಾಯಕ ದುರಂತ ಅಂತ್ಯ,ಕೇವಲ 28ನೇ ವಯಸ್ಸಿಗೆ ಉಸಿರು ಚೆಲ್ಲಿದ ಸಿಂಗರ್..!

ದೇವಸ್ಥಾನಕ್ಕೆಂದು ಬಂದ ಯುವಕ ಹೃದಯಾಘಾತದಿಂದ ಸಾವು, 28 ವರ್ಷದ ಯುವಕನ ಸಾವು ಸಂಭವಿಸಿದ್ದೆಲ್ಲಿ?

ಅರಂತೋಡು: ಬೈಕಿಗೆ ಅಡ್ಡ ಬಂದ ಕಾಡುಕೋಣ ಸವಾರನಿಗೆ ಗಾಯ