ಕ್ರೈಂದೇಶ-ಪ್ರಪಂಚ

ಬಯಲಾಯ್ತು ಹಿಂದೂ ಕುಟುಂಬದ ದುರಂತ ಅಂತ್ಯದ ರಹಸ್ಯ! 11 ಮಂದಿಯ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ರೋಚಕ ತಿರುವು!

ನ್ಯೂಸ್‌ನಾಟೌಟ್‌: ರಾಜಸ್ತಾನದ ಜೋಧ್​ಪುರ ಜಿಲ್ಲೆಯ ಹೊಲವೊಂದರಲ್ಲಿ ಪಾಕಿಸ್ತಾನದಿಂದ ವಲಸೆ ಬಂದಿದ್ದ ಹಿಂದೂ ಕುಟುಂಬದ 11 ಸದಸ್ಯರು ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ೩ ವರ್ಷಗಳ ಬಳಿಕ ಅಂದರೆ ಎಪ್ರಿಲ್ 22 ರಂದು ಪೊಲೀಸರು ಆತ್ಮಹತ್ಯೆಯ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಕೌಟುಂಬಿಕ ಕಲಹದಿಂದ 11 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದು, ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ ಎನ್ನಲಾಗಿದೆ. 2020ರ ಆಗಸ್ಟ್ 9 ರಂದು ಜೋಧ್​ಪುರದ ದೇಚು ತಹಸಿಲ್​ನ ಲೋಡ್ಟಾ ಗ್ರಾಮದ ಜಮೀನಿನಲ್ಲಿ ಒಂದೇ ಕುಟುಂಬದ 11 ಮಂದಿ ಸದಸ್ಯರು ಶವವಾಗಿ ಪತ್ತೆಯಾಗಿದ್ದರು.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಇತರ ಕೆಲವು ಕುಟುಂಬ ಸದಸ್ಯರು ಮತ್ತು ಸಮುದಾಯದ ಕೆಲವು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು ಎಂದು ವರದಿ ತಿಳಿಸಿದೆ. ಮೃತರನ್ನು ಬುಧರಾಮ್ ಭೀಲ್ (75), ಅವರ ಪತ್ನಿ ಅಂತರಾ ದೇವಿ (70); ಮಗ ರವಿ (31); ಪುತ್ರಿಯರಾದ ಪ್ರಿಯಾ (25) ಮತ್ತು ಸುಮನ್ (22); ಮೊಮ್ಮಕ್ಕಳಾದ ಮುಕ್ದಾಶ್ (17) ಮತ್ತು ನೈನ್ (12); ಲಕ್ಷ್ಮಿ (40) ಮತ್ತು ಕುಟುಂಬದ ಉಳಿದಿರುವ ಸದಸ್ಯ ಕೇವಲ್ ರಾಮ್ ಅವರ ಮೂವರು ಅಪ್ರಾಪ್ತ ಪುತ್ರರು ಎಂದು ಎನ್ನಲಾಗಿದೆ.

ಗುಡಿಸಿಲಿನಲ್ಲಿ ಪೊಲೀಸರಿಗೆ ಕೆಲವು ರಾಸಾಯನಿಕದ ಬಾಟಲಿಗಳು ಸಿಕ್ಕಿದ್ದವು, ಮೃತಪಟ್ಟವರೆಲ್ಲರಿಗೂ ಯಾವುದೋ ವಿಷಕಾರಿ ಪದಾರ್ಥವನ್ನು ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅವರು ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಹಿಂದುಗಳಾಗಿದ್ದು, ಭಿಲ್ ಸಮುದಾಯಕ್ಕೆ ಸೇರಿದವರಾಗಿದ್ದರು. ಕೇವಲ್ ರಾಮ್ ಎಂಬಾತನ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು.

ಪಾಕಿಸ್ತಾನದ ಹಿಂದೂ ವಲಸಿಗರ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿರುವ ಸೀಮಂತ್ ಲೋಕ ಸಂಘಟನೆಯ ಮುಖ್ಯಸ್ಥ ಹಿಂದೂ ಸಿಂಗ್ ಸೋಧಾ, ಆತ್ಮಹತ್ಯೆಯ ತನಿಖೆಯಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದರು ಎಂದು ವರದಿ ತಿಳಿಸಿದೆ.

Related posts

ಚೆನ್ನೈನಿಂದ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಹೊತ್ತು ಸಾಗಿದ ಹಡಗು..! ಬಂದರಿನಲ್ಲಿ ನಿಲುಗಡೆಗೆ ನಿರಾಕರಿಸಿದ ಸ್ಪೇನ್‌..!

ರಾಜ್ಯದ ಪ್ರಖ್ಯಾತ ಪ್ರವಾಸಿ ನಗರದಲ್ಲಿ ಗಡಗಡ ನಡುಗಿದ ಭೂಮಿ..! ಮತ್ತೊಮ್ಮೆ ಭೂಕಂಪದ ಆತಂಕದಲ್ಲಿ ಜನತೆ..!

ಪ್ರಿಯಕರ ಜೊತೆ ಸೇರಿ ವಿಶೇಷಚೇತನ ಮಗಳನ್ನೇ ಕೊಲೆಗೈದ ತಾಯಿ..!ಅಕ್ರಮ ಸಂಬಂಧಕ್ಕೆ ಅಡ್ಡಿಯಾದಳೇ ಮಗಳು..!ಛೇ..ನೀನೆಂಥಾ ತಾಯಿ..!