ಸುಳ್ಯ

ಸಂಗೀತ ವರ್ಷಧಾರೆ ಮಳೆ ಹಾಡುಗಳ ಕಲರವ ಕಾರ್ಯಕ್ರಮದ ಉದ್ಘಾಟನೆ, ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಮೂಡಿಸುವ ಉದ್ದೇಶ

ನ್ಯೂಸ್ ನಾಟೌಟ್: ಸಂಗೀತ ವರ್ಷಧಾರೆ ಮಳೆ ಹಾಡುಗಳ ಕಲರವ ಕಾರ್ಯಕ್ರಮವನ್ನು ಸುವಿಚಾರ ಸಾಹಿತ್ಯ ಸಂಘ, ವಿದ್ಯಾ ಬೋಧಿನೀ ಪ್ರೌಢಶಾಲೆ ಬಾಳಿಲ ಇದರ ಆಶ್ರಯದಲ್ಲಿ ಬುಧವಾರ ನಡೆಸಲಾಯಿತು. ವಿದ್ಯಾ ಬೋಧಿನೀ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣರ ರಾವ್ ಯು ನಡೆಸಿ ಮಳೆ ಹಾಡುಗಳ ಕಲರವ ಕಾರ್ಯಕ್ರಮ ಉದ್ಘಾಟಿಸಿದರು. ಈ ಕಾರ್ಯಕ್ರಮ ಮನಸ್ಸಿಗೆ ಮುದ ನೀಡಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಮೂಡಿಸಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಳೆ ತಜ್ಞ ಹಾಗೂ ವಿಶ್ಲೇಷಕ ಶ್ರೀ ಪಿ ಜಿಎಸ್ ಎನ್ ಪ್ರಸಾದ್ ಅವರ ಸಾಧನೆಯನ್ನು ಗುರುತಿಸಿ ಕ ಸಾ ಪ ಸುಳ್ಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಗೀತ ವರ್ಷಧಾರೆ ಮಳೆ ಕಲರವ ಕಾರ್ಯಕ್ರಮವನ್ನು ಭಾವನಾ ಸುಗಮ ಸಂಗೀತ ಬಳಗದ ಕೆ ಆರ್ ಗೋಪಾಲಕೃಷ್ಣ ಹಾಗೂ ಉಪನ್ಯಾಸಕಿ ಶ್ರೀಮತಿ ಸತ್ಯವತಿ ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ ಸಾ ಪ ಅಧ್ಯಕ್ಷ ಚಂದ್ರಶೇಖರ್ ಪೇರಾಲ್ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಕಸಾಪ ಕೋಶಾಧಿಕಾರಿ ದಯಾನಂದ ಆಳ್ವಾ ಉಪಸ್ಥಿತರಿದ್ದು, ಮುಖ್ಯಶಿಕ್ಷಕ ಶ್ರೀ ಯಶೋಧರ ನಾರಾಲು ಸ್ವಾಗತಿಸಿ ಶ್ರೀ ಅರವಿಂದ ಬಾಳಿಲ ಎಲ್ಲರನ್ನೂ ವಂದಿಸಿದರು. ಶ್ರೀ ದಿನೇಶ್ ಇವರು ಕಾರ್ಯಕ್ರಮ ನಿರೂಪಿದರು.

Related posts

ಕೇವಲ ಒಂದು ಸಾವಿರ ರುಪಾಯಿಗೆ ಸ್ವಂತ ಮನೆಯನ್ನು ಗೆಲ್ಲಬೇಕೆ? ಹಾಗಿದ್ದರೆ ಇಲ್ಲಿದೆ ಸುವರ್ಣಾವಕಾಶ, ಕೇವಲ ಮಾಸಿಕ ಒಂದು ಸಾವಿರ ರುಪಾಯಿಗೆ ನಿಮಗೂ ಗೆಲ್ಲಬಹುದು ಸ್ವಂತ ಮನೆ; ಜೊತೆಗೆ ಐಶಾರಾಮಿ ಕಾರು, ಸುಸಜ್ಜಿತ ಜಾಗ ಹೀಗೆ ಬಹುಮಾನಗಳ ಸುರಿಮಳೆ

ಕುಕ್ಕೆ ಸುಬ್ರಹ್ಮಣ್ಯದಿಂದ ನಾಪತ್ತೆಯಾಗಿದ್ದ ವ್ಯಕ್ತಿ ಒಳ ಉಡುಪಿನಲ್ಲಿ ಪತ್ತೆ..! ಗುತ್ತಿಗಾರಿನ ಅಮರ ಆಂಬುಲೆನ್ಸ್ ನ ಉಚಿತ ಸೇವೆಗೆ ಮತ್ತು ಹರಿಹರ ಸಂಗಮ ಕ್ಷೇತ್ರದ ಅಯ್ಯಪ್ಪ ಭಕ್ತರ ಸಹಕಾರಕ್ಕೆ ಭಾರೀ ಮೆಚ್ಚುಗೆ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಪತ್ನಿ ಚೆನ್ನಮ್ಮ ಜೊತೆ ಬಂದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ದಂಪತಿ, ಇಲ್ಲಿದೆ ವೀಕ್ಷಿಸಿ ಫೋಟೋ