ನ್ಯೂಸ್ ನಾಟೌಟ್: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿಗೆ ರಾಜ್ಯ ಸರ್ಕಾರ ಗನ್ ಮ್ಯಾನ್ ಭದ್ರತೆ ನೀಡಿದೆ.
2024ರಲ್ಲಿ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಚುನಾಯಿತರಾಗಿದ್ದರು. ಅದಕ್ಕೂ ಹಿಂದಿನಿಂದಲೇ ಹಿಂದೂಪರ ಚಟುವಟಿಕೆಗಳ ಮೂಲಕವೂ ಗುರುತಿಸಿಕೊಂಡಿದ್ದ ಕಿಶೋರ್ ಕುಮಾರ್ ಮೂಲಭೂತವಾದಿ ಸಂಘಟನೆಗಳಿಂದ ಜೀವ ಬೆದರಿಕೆಗಳು ಬಂದಿದ್ದವು ಎನ್ನಲಾಗಿದೆ.
ಅವರ ಚಲನವಲನಗಳನ್ನು ಗಮನಿಸಿ ಹಲವು ಬಾರಿ ಅವರನ್ನು ಹಿಂಬಾಲಿಸಲಾಗಿದೆ. ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅವರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿತ್ತು. ಇದೀಗ ಗುಪ್ತಚರ ಇಲಾಖೆಯ ಮಾಹಿತಿಯಂತೆ ಸರ್ಕಾರ ಗನ್ ಮ್ಯಾನ್ ಒದಗಿಸಿದೆ.
RCB ಗೆಲುವಿನ ಸಂಭ್ರಮಾಚರಣೆ ವೇಳೆ 21ರ ಯುವಕ ಸಾವು..! ತಡರಾತ್ರಿ ಯುವಕರ ಬೈಕ್ ಜಾಥಾದಲ್ಲಿ ಅಪಘಾತ..!