ಕೊಡಗುಕ್ರೈಂವೈರಲ್ ನ್ಯೂಸ್

ಮಡಿಕೇರಿ:10 ನೇ ತರಗತಿ ಬಾಲಕಿ ಭೀಕರ ಹತ್ಯೆ ಪ್ರಕರಣ, ಕೊಡವ ಸಂಪ್ರದಾಯದಂತೆ ನೆರವೇರಿದ ಅಂತ್ಯಕ್ರಿಯೆ

ನ್ಯೂಸ್ ನಾಟೌಟ್ : ಭೀಕರ ಹತ್ಯೆಗೀಡಾದ 10ನೇ ತರಗತಿ ಬಾಲಕಿ ಮೀನಾ ಅಂತ್ಯಕ್ರಿಯೆಯನ್ನು ಭಾನುವಾರ(ಮೇ.೧೨) ಕುಟುಂಬಸ್ಥರು ಸ್ವಗ್ರಾಮದಲ್ಲಿ ಕೊಡಗಿನಲ್ಲಿ ನೇರವೇರಿಸಿದ್ದಾರೆ.

ಶನಿವಾರ (ಮೇ 11) ಬೆಳಗ್ಗೆಯಷ್ಟೇ ಬಾಲಕಿ ಹತ್ಯೆಗೈದ ಅರೋಪಿ ಓಂಕಾರಪ್ಪ ಅಲಿಯಾಸ್ ಪ್ರಕಾಶ್ ನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದರು. ಅಲ್ಲದೇ ಹತ್ಯೆ ಮಾಡಿದ ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ಮಾಡುವ ವೇಳೆಯಲ್ಲಿ ಬಾಲಕಿ ರುಂಡವನ್ನು ಅವನಿಂದಲೇ ಪತ್ತೆ ಮಾಡಿಸಿ ವಿಚಾರಣೆಯನ್ನೂ ನಡೆಸಿದ್ದರು. ನಂತರ ಬಾಲಕಿಯ ರುಂಡವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದರು. ಇನ್ನೂ ಗಂಭೀರವಾಗಿ ಗಾಯಗೊಂಡು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೀನಾ ತಾಯಿ ಸಹ ಮಗಳ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.

ಅದರಂತೆ ಇಂದು (ಮೇ 12) ಮಡಿಕೇರಿ ಜಿಲ್ಲಾಸ್ಪತ್ರೆಯ ವೈದ್ಯರು. ಮಧ್ಯಾಹ್ನದ ಬಳಿಕ ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿದ್ದರು. ಬಳಿಕ ಬಾಲಕಿಯ ಕುಟುಂಬಸ್ಥರು ಬಾಲಕಿಯ ಮೃತದೇಹವನ್ನು ಸೋಮವಾರಪೇಟೆ ತಾಲ್ಲೂಕಿನ ಸುರ್ಲಭಿ ಗ್ರಾಮದ ಕುಂಬಾರಗಡಿಗೆ ತೆಗೆದುಕೊಂಡು ಹೋಗಿ ಕೊಡವ ಸಾಂಪ್ರದಾಯದಂತೆ ಬಾಲಕಿಯ ಅಂತ್ಯಸಂಸ್ಕಾರ ನೇರವೇರಿಸಿದ್ದಾರೆ.

Click 👇

https://newsnotout.com/2024/05/uppinangady-theft-police
https://newsnotout.com/2024/05/muslim-hindu-muslim-issue-at-bidar
https://newsnotout.com/2024/05/mother-and-baby-in-forest-kannada-news

Related posts

ಭಾರತೀಯ ವಾಯುಪಡೆ ವಿಮಾನ ಪತನವಾದದ್ದೇಗೆ..? ಮುಂದೇನಾಯ್ತು..?

ಯುವತಿ ನಿಗೂಢ ನಾಪತ್ತೆ..! ಬಲವಂತದಿಂದ ಮದುವೆ ಮಾಡಿ ಇಸ್ಲಾಂಗೆ ಮತಾಂತರ ಮಾಡಿದ್ದಾರೆಂದು ತಂದೆ ದೂರು

ತಡರಾತ್ರಿ ಪೊಲೀಸ್ ಠಾಣೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ಠಾಣಾಧಿಕಾರಿಗಳಿಗೆ ಬೈದು ಬೆದರಿಕೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ FIR ದಾಖಲು