ವೈರಲ್ ನ್ಯೂಸ್ಶಿಕ್ಷಣಸಾಧಕರ ವೇದಿಕೆಸುಳ್ಯ

ಸುಳ್ಯ: ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯ 35ನೇ ವರ್ಷಕ್ಕೆ ಪಾದಾರ್ಪಣೆ, 1990ರಲ್ಲಿ ಭಾರತೀಯ ವಕೀಲರ ಸಂಘದಿಂದ ಮಾನ್ಯತೆ ಪಡೆದ ಹೆಗ್ಗಳಿಕೆ

180

ನ್ಯೂಸ್ ನಾಟೌಟ್: ಸುಳ್ಯ ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯ ಇಂದಿಗೆ(ಆ.8) 34 ವರ್ಷಗಳನ್ನು ಪೂರೈಸಿ 35ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.

ಸುಳ್ಯದಲ್ಲಿ ಕಿಂಡರ್ ಗಾರ್ಟನ್ ನಿಂದ ವೈದ್ಯಕೀಯ ಶಿಕ್ಷಣದವರೆಗಿನ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಶಿಕ್ಷಣ ಬ್ರಹ್ಮ ಎನಿಸಿರುವ ಗೌರವಾನ್ವಿತ ಶ್ರೀ ಕುರುಂಜಿ ವೆಂಕಟ್ರಮಣ ಗೌಡರು 08-08-1990ರಲ್ಲಿ ಕಾನೂನು ಮಹಾವಿದ್ಯಾಲಯವನ್ನು ಸ್ಥಾಪಿಸಿದ್ದು, ಈಗ ಅವರ ಪುತ್ರ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ. ವಿ. ಚಿದಾನಂದರು ಮುನ್ನಡೆಸುತ್ತಿರುವ ಈ ಸಂಸ್ಥೆ 35ನೇ ವರ್ಷಕ್ಕೆ ಕಾಲಿಟ್ಟಿದೆ.

ಕೆ.ವಿ.ಜಿ. ಕಾನೂನು ಕಾಲೇಜಿಗೆ 1990ರಲ್ಲಿ ಭಾರತೀಯ ವಕೀಲರ ಸಂಘದಿಂದ (ಬಾರ್ ಕೌನ್ಸಿಲ್ ಆಫ್ ಇಂಡಿಯ) ಮಾನ್ಯತೆ ದೊರೆತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಶಾಶ್ವತ ಸಂಯೋಜನೆಯನ್ನು ಹೊಂದಿದೆ. 5 ವರ್ಷದ ಬಿ.ಎ, ಎಲ್.ಎಲ್.ಬಿ ಕಾನೂನು ಪದವಿ ಮತ್ತು 3 ವರ್ಷದ ಕಾನೂನು ಪದವಿ ತರಗತಿಗಳು ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ನಡೆಯುತ್ತಿವೆ.

ಹಳ್ಳಿ ಪ್ರದೇಶವಾದ ಸುಳ್ಯದಲ್ಲಿ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯವು ಕಾನೂನು ವಿದ್ಯಾಬ್ಯಾಸಕ್ಕೆ ಬೇಕಾಗಿರುವ ಎಲ್ಲಾ ಮೂಲಭೂತ ಸೌಕರ್ಯವನ್ನು ಹೊಂದಿದ್ದು, ನೂತನವಾಗಿ ನಿರ್ಮಿಸಿದ ಬೃಹತ್ ಸ್ವಂತ ಕಟ್ಟಡವನ್ನು ಹೊಂದಿದೆ. ಸುಸಜ್ಜಿತ ಗ್ರಂಥಾಲಯ, ಇ-ಗ್ರಂಥಾಲಯ, ವಿಶಾಲ ಸಭಾಂಗಣ ಮತ್ತು ಅಣಕು ನ್ಯಾಯಾಲಯ ಕೊಠಡಿಯನ್ನು ಹೊಂದಿದೆ. ಇದರೊಂದಿಗೆ ವಿದ್ಯಾರ್ಥಿಗಳ ಹೆಚ್ಚಿನ ಕಲಿಕೆಗೋಸ್ಕರ ದ್ರೃಕ್-ಶ್ರವಣ ತಂತ್ರಜ್ಞಾನದ ಕೊಠಡಿಯನ್ನು ಒದಗಿಸಲಾಗಿದೆ.
ಪ್ರತಿ ಶೈಕ್ಷಣಿಕ ವರ್ಷದಲ್ಲೂ ಉತ್ತಮ ಫಲಿತಾಂಶವನ್ನು ಪಡೆಯುತ್ತಾ ಬಂದಿರುವುದು ಈ ಸಂಸ್ಥೆ ಯ ಹೆಗ್ಗಳಿಕೆ. ಅಲ್ಲದೇ ಈ ಕಾನೂನು ವಿದ್ಯಾಲಯದಲ್ಲಿ ಪದವಿಯನ್ನು ಪಡೆದ ಹಲವಾರು ವಿದ್ಯಾರ್ಥಿಗಳು ನ್ಯಾಯಾಧೀಶರಾಗಿ, ಸಂಶೋಧಕರಾಗಿ, ನ್ಯಾಯವಾದಿಗಳಾಗಿ, ಆಡಳಿತ ಸೇವಾ ವಿಭಾಗದಲ್ಲಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಹಾಗೂ ಇನ್ನಿತರ ಉನ್ನತ ಹುದ್ದೆಯಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಪಠ್ಯೇತರ ಚಟುವಟಿಕೆಗಳಾದ ರಾಷ್ಟ್ರೀಯ ಸೇವಾಯೋಜನೆ ಘಟಕ, ಅಂತರ್‌ ಕಾಲೇಜು ಸಾಂಸ್ಕೃತಿಕ ಚಟುವಟಿಕೆ, ಕ್ರೀಡಾ ಕ್ಷೇತ್ರ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಸಾಧನೆಗೈಯುತ್ತಿದ್ದಾರೆ.

ಕಾನೂನು ಪದವೀಧರರಿಗೆ, ನ್ಯಾಯವಾದಿಗಳಾಗಿ ಮಾತ್ರವಲ್ಲದೇ ನ್ಯಾಯಾಧೀಶರಾಗಿ, ಕಾನೂನು ಉಪನ್ಯಾಸಕರಾಗಿ, ಕಾನೂನು ಸಲಹೆಗಾರರಾಗಿ, ಕಂಪೆನಿಯ ಆಡಳಿತಾತ್ಮಕ ಹುದ್ದೆಗಳಲ್ಲಿ ಸರ್ಕಾರಿ ಉನ್ನತ ಹುದ್ದೆಗಳಲ್ಲಿ ರಕ್ಷಣಾ ಇಲಾಖೆಗಳಲ್ಲಿ ಸೇವೆ ಸಲ್ಲಿಸಲು ಹೆಚ್ಚಿನ ಒತ್ತನ್ನು ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಾನೂನು ಶಿಕ್ಷಣ, ಕಾನೂನು ಅರಿವು ಪಡೆಯುವುದು ಅತೀ ಮುಖ್ಯ. ಈ ನಿಟ್ಟಿನಲ್ಲಿ ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ರಾಜ್ಯ, ರಾಷ್ಟ್ರಮಟ್ಟದ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಕಾನೂನು ತಜ್ಞರುಗಳ ಮೂಲಕ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಕಾನೂನಿನ ಮಹತ್ವವನ್ನು ತಿಳಿಸುವ ಕಾರ್ಯ ಮಾಡುತ್ತಿದೆ.

Click

https://newsnotout.com/2024/08/dog-droped-down-from-5-flood-baby-nomore-kannada-news/
https://newsnotout.com/2024/08/money-transfer-limit-increased-in-upi-kannada-news-riserve-bank/
See also  ಈ ಜಿಲ್ಲೆಯಲ್ಲಿ10 ನೇ ಪಾಸಾದವರೂ ವೈದ್ಯರು..! ಆಕೆಯಿಂದ ಬಯಲಾಯ್ತು 384 ನಕಲಿ ವೈದ್ಯರ ದಂಧೆ..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget