ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಸ್ಪರ್ಧಿ ಬಿಜೆಪಿ ಅಭ್ಯರ್ಥಿ ನಿವೃತ್ತ ಕ್ಯಾಪ್ಟನ್ ಬ್ರಿಜೇಶ್ ಚೌಟ ಬುಧವಾರ (ಏ.೧೭) ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಯುವ ಸಮೂಹದ ಜೊತೆಗೆ ಸಂವಾದ ನಡೆಸಿದರು.
ಸದ್ಯದಲ್ಲೇ ಚುನಾವಣೆ ಎದುರಾಗಲಿದೆ. ಯುವಕರ ಆಶೋತ್ತರಗಳೇನು, ನಿರೀಕ್ಷೆಗಳೇನು ಅನ್ನುವುದರ ಬಗ್ಗೆ ಚೌಟ ಒಂದಷ್ಟು ಸಮಯ ಕಳೆದರು. ಈ ಮೂಲಕ ಯುವಕರ ನಾಡಿಮಿಡಿತವನ್ನು ಅರ್ಥ ಮಾಡಿಕೊಳ್ಳುವಂತಹ ಪ್ರಯತ್ನವನ್ನು ಬ್ರಿಜೇಶ್ ಚೌಟ ಮಾಡಿದರು. ಈ ವೇಳೆ ಬಿಜೆಪಿ ಪಕ್ಷದ ಹಲವು ನಾಯಕರು, ಕಾರ್ಯಕರ್ತರು ಕೂಡ ಉಪಸ್ಥಿತರಿದ್ದರು.