Uncategorized

ಕೊಡಗಿನಲ್ಲಿ ಭೂಕಂಪದ ಅನುಭವ, ಜನ ಕಕ್ಕಾಬಿಕ್ಕಿ..!

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಇಂದು ಮುಂಜಾನೆ ಭೂಮಿ ಕಂಪಿಸಿದ ಅನುಭವವಾಗಿದೆ. ಜನ ಕಂಪನದಿಂದ ಭಯಭೀತರಾಗಿ ಮನೆಯಿಂದ ಹೊರಗೆ ಬಂದರು. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ನಗರನಹಳ್ಳಿ ಗ್ರಾಮ ಪಂಚಾಯಿತಿಯ ಮಲುಗಾನ ಹಳ್ಳಿಯಿಂದ ೦.೯ ಕಿ.ಮೀ. ದೂರದಲ್ಲಿ ೧೦ ಅಡಿ ಆಳದಲ್ಲಿ ಬೆಳಗ್ಗೆ ೪ ಗಂಟೆ ೩೭ ನಿಮಿಷ ೨೧ ಸೆಕೆಂಡ್‌ಗೆ ಭೂಕಂಪನವಾಗಿದೆ.

ಈ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾಹಿತಿ ನೀಡಿದೆ. ಈ ಪ್ರಕಾರವಾಗಿ ಕೊಡಗಿನ ಸೋಮವಾರಪೇಟೆ ತಾಲೂಕಿನ ರೇಂಜರ್ ಬ್ಲಾಕ್, ಅಮ್ಮಳ್ಳಿ ಗ್ರಾಮ, ನೇಗಳ್ಳೆ ಗ್ರಾಮ, ಮಡಿಕೇರಿ ತಾಲೂಕಿನ ದೇವಸ್ತೂರು ಹಾಗೂ ಹಾಸನದ ಗಡಿ ಪ್ರದೇಶದ ಕೆಲವೆಡೆ ಭೂಕಂಪನದ ಅನುಭವ ಆಗಿದೆ ಎಂದು ತಿಳಿದು ಬಂದಿದೆ.

Related posts

ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ರೈಲಿನಡಿಗೆ ಬಿದ್ದರು..!ಇಬ್ಬರು ಮಕ್ಕಳು ದುರಂತ ಅಂತ್ಯ,ಏನಿದು ಹೃದಯವಿದ್ರಾವಕ ಘಟನೆ?

ಅಷ್ಟು ದೊಡ್ಡ ಬಂಡೆಗೆ ಎಷ್ಟೇ ಜೋರಾಗಿ ತಲೆ ಜಜ್ಜಿದರೂ ಗಾಯವಾಗೋದಿಲ್ಲ ಏಕೆ?ದೇವರ ಮಹಿಮೆಯೇ? ಏನಿದು ವಿಶಿಷ್ಟ ಜಾತ್ರೆ?

ಮಾಸಾಶನಕ್ಕಾಗಿ ಬರೋಬ್ಬರಿ 5 ಕಿ.ಮೀ. ದೂರ ತೆವಳಿಕೊಂಡೇ ಸಾಗಿದ ವೃದ್ಧೆ..! ಸರ್ಕಾರಕ್ಕೆ ಕನಿಕರ ಇಲ್ಲವೇ ಎಂದು ಕೆಂಡಾಮಂಡಲರಾದ ಕುಮಾರಸ್ವಾಮಿ..!