ಕರಾವಳಿ

ಮಂಗಳೂರು ದಸರಾ ಶೋಭಾಯಾತ್ರೆಯಲ್ಲಿ ‘ಕೆದಂಬಾಡಿ ರಾಮಯ್ಯ ಗೌಡ’ರ ಸ್ತಬ್ಧಚಿತ್ರ,ಹಲವು ವಿಶೇಷತೆಗಳನ್ನೊಳಗೊಂಡ ಶೋಭಾಯಾತ್ರೆ ಹೇಗಿರಲಿದೆ ಇಲ್ಲಿದೆ ವಿವರ..

ನ್ಯೂಸ್ ನಾಟೌಟ್ :ವರ್ಷಂಪ್ರತಿ ನಡೆಯುವಂತೆ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಮಂಗಳೂರು ದಸರಾ ಮಹೋತ್ಸವದ ಶೋಭಾಯಾತ್ರೆ ಈ ಬಾರಿ ವಿಶೇಷವಾಗಿ ಅದ್ದೂರಿಯಾಗಿ ನಡೆಯಲಿದೆ.ಅ.24 ರಂದು ನಡೆಯಲಿರುವ ಈ ಕಾರ್ಯಕ್ರಮ ವೈಭವದಿಂದ ಕೂಡಿರಲಿದ್ದು,ಇದರಲ್ಲಿ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಸಹಯೋಗದಲ್ಲಿ ಬ್ರಿಟೀಷರ ವಿರುದ್ಧ ರೈತ ಸೈನ್ಯ ಕಟ್ಟಿ ಗೆದ್ದ ಸ್ವಾತಂತ್ರ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸ್ತಬ್ದ ಚಿತ್ರವೂ ಸ್ಥಾನ ಪಡೆಯಲಿದೆ.

ಇದು ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಆಗಿರುವುದರಿಂದ ಈ ಕಾರ್ಯಕ್ರಮ ತುಂಬಾ ವಿಶೇಷವಾಗಿರಲಿದೆ.ತುಳುನಾಡಿನ ಹೆಮ್ಮೆಯ ಸ್ವಾತಂತ್ರ ಹೋರಾಟಗಾರ ರಾಮಯ್ಯ ಗೌಡರಿಗೆ ಗೌರವ ಸಲ್ಲಿಸುವ ಮೂಲಕ ಅವರ ಹೆಸರನ್ನು ಜನ ಮಾನಸದಲ್ಲಿ ಮೂಡಿಸುವ ವಿಶೇಷ ಪ್ರಯತ್ನವಾಗಿ ಸ್ತಬ್ದ ಚಿತ್ರವನ್ನು ಪ್ರದರ್ಶಿಸಲಾಗುವುದು ಹಾಗೂ ಎಲ್ಲಾ ಸಮಾಜ ಬಾಂಧವರು ಭಾಗವಹಿಸಬೇಕೆಂದು ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಕಾಲೇಜಿಗೆ ಹೋಗುವ ಹಿಂದೂ ಹುಡುಗಿಯ ಬ್ಯಾಗ್‌ನಲ್ಲಿ ಮುಸ್ಲಿಂ ಹುಡುಗನ ಪ್ರೇಮ ಪತ್ರ

6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಯುವುದನ್ನು ತಡೆದ ಮಂಗಗಳು..! ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಗುವಿನ ಬಟ್ಟೆ ಕಳಚಿದ್ದ ಆರೋಪಿ..!

ದೈವ ನರ್ತಕರಿಗೆ ಮಾಸನಾಶನವಾಯ್ತು, ಈಗ ಕಾಡಂಚಿನ ಜನರ ಧ್ವನಿಯಾದ ರಿಷಬ್ ಶೆಟ್ಟಿ