ಕ್ರೈಂ

ಕಾವು: ಕಾರುಗಳ ನಡುವೆ ಭೀಕರ ಅಪಘಾತ, ಕೊಡಗಿನ ಯುವಕ ಬಲಿ

ಪುತ್ತೂರು: ಇಲ್ಲಿನ ಮಾಣಿ-ಮೈಸೂರು ಹೆದ್ದಾರಿಯಲ್ಲಿನ ಕಾವು ಸಮೀಪದ ಮಡ್ಯಂಗಳ ಎಂಬಲ್ಲಿ ನಡೆದ ಕಾರುಗಳ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಕೊಡಗಿನ ಭಾಗಮಂಡಲ ಸಮೀಪದ ಚೆಟ್ಟಿಮಾನಿಯ ಯುವಕ ಸಾವಿಗೀಡಾದ ಘಟನೆ ನಡೆದಿದೆ.

ಮೃತರನ್ನು ಚೆಟ್ಟಿಮಾನಿ ನಿವಾಸಿ ಪೊನ್ನಟ್ಟಿ ಜಯಕುಮಾರ ಮತ್ತು ನವೀನ ದಂಪತಿಗಳ ಪುತ್ರ ರಾಜೀವ್ ( 31 ) ಎಂದು ಗುರುತಿಸಲಾಗಿದೆ. ಮೃತರು ಪತ್ನಿ, ಪುತ್ರಿಯೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದರು. ಇತ್ತೀಚೆಗಷ್ಟೇ ಹೊಸ ಮನೆಯನ್ನು ಚೆಟ್ಟಿಮಾನಿಯಲ್ಲಿ ಕಟ್ಟಿಸಿದ್ದರು. ಘಟನೆಯಲ್ಲಿ ಒಟ್ಟು ನಾಲ್ವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

ಗುದನಾಳದಲ್ಲಿ 403 ಗ್ರಾಂ ಚಿನ್ನ ಸಾಗಿಸಿದ ಪ್ರಯಾಣಿಕ…!

ಇಬ್ಬರನ್ನು ಅಪಹರಿಸಿ ಕತ್ತು ಕೊಯ್ದು ನಕ್ಸಲರು..! ರಹಸ್ಯ ಮಾಹಿತಿ ನೀಡಿದವರ ಬಗ್ಗೆ ಪ್ರೆಸ್ ನೋಟ್ ಬಿಡುಗಡೆ ಮಾಡಿದ ನಕ್ಸಲರು..!

ಪಾರ್ಟಿ ಮೂಡಲ್ಲಿದ್ದ ಆತನಿಗೆ ಏಕಾಏಕಿ ಚಾಕು ಇರಿದ ಪ್ರೇಯಸಿ..! ಯುವಕನಿಗೆ ಐಸಿಯುನಲ್ಲಿ ಚಿಕಿತ್ಸೆ..!