ಕೊಡಗು

ಮಡಿಕೇರಿ:ಕಾಡಾನೆ ದಾಳಿಗೆ ಮತ್ತೊಬ್ಬ ವ್ಯಕ್ತಿ ಬಲಿ;ಸ್ಥಳಕ್ಕೆ ಭೇಟಿ ನೀಡಿದ ಶಾಸಕ

ನ್ಯೂಸ್‌ ನಾಟೌಟ್‌: ಕಾಡಾನೆ ದಾಳಿಯಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬಗ್ಗೆ ವರದಿಯಾಗಿದೆ.ಹಾಡಿಯ ನಿವಾಸಿ ಜೇನುಕುರುಬರ ತಮ್ಮು (64) ಮೃತ ದುರ್ದೈವಿ ಎಂದು ತಿಳಿದು ಬಂದಿದ್ದು, ಈ ಘಟನೆ ಸೋಮವಾರಪೇಟೆ ತಾಲೂಕಿನ ಯಡವನಾಡು ಗ್ರಾಮದ ಕೂಪಾಡಿ ಹಾಡಿ ವ್ಯಾಪ್ತಿಯಲ್ಲಿ ಜ.14ರ ಮಂಗಳವಾರ ನಡೆದಿದೆ.

ಅವಿವಾಹಿತರಾಗಿದ್ದ ವ್ಯಕ್ತಿ ಕುರಿ ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದು, ಭಾನುವಾರ ಎಂದಿನಂತೆ ಕುರಿ ಮೇಯಿಸಲೆಂದು ಹೋದವರು ಮರಳಿ ಹಾಡಿಗೆ ಬಂದಿರಲಿಲ್ಲ. ಸುತ್ತಮುತ್ತಲೆಲ್ಲ ಹುಡುಕಾಟ ನಡೆಸಿದರೂ ತಮ್ಮು ಅವರ ಸುಳಿವು ಸಿಗಲಿಲ್ಲ. ಇಂದು (ಜ.14ರ) ಕೂಪಾಡಿ ಹಾಡಿಯಿಂದ ಸ್ವಲ್ಪ ದೂರದ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದ್ದು, ಇದು ಕಾಡಾನೆ ದಾಳಿಯಿಂದ ಆದ ಸಾವು ಎಂದು ಶಂಕಿಸಲಾಗಿದೆ.ಘಟನಾ ಸ್ಥಳಕ್ಕೆಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಸೇರಿದಂತೆ ಅರಣ್ಯ ಅಧಿಕಾರಿಗಳು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Related posts

ಮದೆನಾಡು: ಮನೆಯೊಳಗೆ ನುಗ್ಗಿದ ಲಾರಿ

ಮಡಿಕೇರಿ: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ,ಪೋಕ್ಸೋ ಪ್ರಕರಣದಡಿ 20 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ

ಮಡಿಕೇರಿ : ಲಂಚಕ್ಕೆ ಬೇಡಿಕೆ ಇಟ್ಟ ಮಹಿಳಾ ಅಧಿಕಾರಿ ಲೋಕಾಯುಕ್ತ ಬಲೆಗೆ