ಕ್ರೈಂಸುಳ್ಯ

ಕಲ್ಮಕಾರು: ಅಯ್ಯಪ್ಪ ಮಾಲಾಧಾರಿ ಮೇಲೆ ಆನೆ ದಾಳಿ..! ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್ :ಕಾಡಾನೆ ದಾಳಿಯಿಂದ ಅಯ್ಯಪ್ಪ ವೃತಧಾರಿ ಯುವಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದಲ್ಲಿ ಇಂದು(ಡಿ.17) ಬೆಳಗ್ಗೆ ನಡೆದಿದೆ.

ಕಲ್ಮಕಾರು ಗ್ರಾಮದ ಚರಿತ್ ಎಂಬವರು ಆನೆ ದಾಳಿಗೆ ಒಳಗಾದ ಯುವಕ ಎಂದು ಗುರುತಿಸಲಾಗಿದೆ. ಚರಿತ್ ಅಯ್ಯಪ್ಪ ಮಾಲೆ ಧರಿಸಿರುವುದರಿಂದ ಮಾಲಾಧಾರಿಗಳು ತಂಗುವ ಟೆಂಟ್ ನಲ್ಲಿ ವಾಸವಿದ್ದರು. ಇಂದು ಮುಂಜಾನೆ ಟೆಂಟ್ ಪಕ್ಕದಲ್ಲಿರುವ ತೋಡಿನಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ವರದಿ ತಿಳಿಸಿದೆ.

https://newsnotout.com/2024/12/kananda-news-chattisghar-c-abhikakapura-anada-yadav/

Related posts

ಇನ್ಫೊಸಿಸ್ ಕ್ಯಾಂಪಸ್‌ ನಲ್ಲಿ ಕಾಣಿಸಿಕೊಂಡಿದ್ದ ಚಿರತೆ 10 ದಿನಗಳಿಂದ ಹುಡುಕಿದರೂ ಪತ್ತೆ ಇಲ್ಲ..! ಕಾರ್ಯಾಚರಣೆ ಸ್ಥಗಿತಗೊಳಿಸಿದ ಅರಣ್ಯ ಇಲಾಖೆ..!

ಈ ಬ್ಯಾಂಕ್ ಅನ್ನು ಮುಚ್ಚಲು ನಿರ್ಧರಿಸಿದೆಯಾ RBI..! ಬ್ಯಾಂಕ್ ಮುಚ್ಚಲು ಕಾರಣವೇನು? ನೀವೂ ಈ ಬ್ಯಾಂಕ್ ಗ್ರಾಹಕರಾ? ಗ್ರಾಹಕರಿಗೆ ಎಷ್ಟು ಲಕ್ಷದ ವರೆಗೆ ಪರಿಹಾರ ನೀಡಲಿದೆ ಈ ಬ್ಯಾಂಕ್?

ಸುಳ್ಯ : ಪದೇ ಪದೆ ಕೈ ಕೊಡುತ್ತಿರುವ ನಗರ ಪಂಚಾಯತ್ ಶುದ್ಧ ನೀರಿನ ಘಟಕ, ಶುದ್ಧ ನೀರಿಗಾಗಿ ಜನರ ಪರದಾಟ