ಕ್ರೈಂಬೆಂಗಳೂರು

ತಂದೆ ತಾಯಿಯಿಂದಲೇ ಮಗಳ ಹತ್ಯೆ..! ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ರಹಸ್ಯ!

268

ನ್ಯೂಸ್ ನಾಟೌಟ್: ಮಗಳಿಂದ ಕಿರುಕುಳವನ್ನು ಸಹಿಸಲಾಗದೆ ತಂದೆ-ತಾಯಿ ಇಬ್ಬರು ಸೇರಿ ಮಗಳನ್ನು ಕೊಲೆಗೈದ ಘಟನೆ ಬೆಂಗಳೂರಿನ ಕೋಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮಾರ್ಚ್ ೧೫ ರಂದು ನಡೆದಿದೆ.

ಧನಲಕ್ಷಿ ಬಡಾವಣೆ ನಿವಾಸಿ ಆಶಾ(32), ತಂದೆ ರಮೇಶ್ ಹಾಗೂ ತಾಯಿ ಜೊತೆ ವಾಸವಾಗಿದ್ದರು. ಮಾನಸಿಕ ಅಸ್ವಸ್ಥೆಯಂತೆ ವರ್ತಿಸುತ್ತಿದ್ದ ಆಶಾ, ತಂದೆ-ತಾಯಿಗೆ ದಿನನಿತ್ಯವೂ ಕಿರುಕುಳ ನೀಡುತ್ತಿದ್ದರು ಎಂದು ವರದಿ ತಿಳಿಸಿದೆ. ಇದರಿಂದ ಬೇಸತ್ತ ರಮೇಶ್ ಬುಧವಾರ ರಾತ್ರಿ ಮಲಗಿದ್ದ ಮಗಳ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ.

ಸಹಜ ಸಾವೇಂದು ಮನೆಯವರು ಹೇಳಿದ್ದರು. ಆದರೆ ತಲೆಯಲ್ಲಿ ರಕ್ತ ಹೆಪ್ಪು ಗಟ್ಟಿದ್ದನ್ನು ಗಮನಿಸಿದ ಸಂಬಂಧಿಕರು ಅನುಮಾನಗೊಂಡು ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಹೋಗಿ ವಿಚಾರಿಸಿದಾಗ ಪೊಲೀಸರ ಮುಂದೆ ತಂದೆ ತಪ್ಪು ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

See also  ಜಮೀನಿಗಾಗಿ ಟ್ರ್ಯಾಕ್ಟರ್ ಹತ್ತಿಸಿ ಹೆತ್ತವರನ್ನೇ ಬರ್ಬರವಾಗಿ ಕೊಂದ ಮಗ..! ಆರೋಪಿಗಾಗಿ ಪೊಲೀಸರ ಹುಡುಕಾಟ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget