Uncategorized

ಜೆಡಿಎಸ್‌ ಅಧಿಕಾರಕ್ಕೆ ಬಂದ್ರೆ ಗೋಮಾಂಸ ಮುಕ್ತ ವ್ಯಾಪಾರಕ್ಕೆ ಅವಕಾಶ

ನ್ಯೂಸ್ ನಾಟೌಟ್‌: ಚುನಾವಣೆಗೆ ಇನ್ನೇನು ಎರಡು ದಿನವಷ್ಟೇ ಬಾಕಿ ಇದೆ ಎನ್ನುವಾಗ ವಿವಿಧ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಹಲವು ಆಮಿಷವನ್ನು ತೋರುತ್ತಿವೆ. ಇದೀಗ ಜೆಡಿಎಸ್ ಕೂಡ ಅಂತಹುದ್ದೇ ಕೆಲಸಕ್ಕೆ ಮುಂದಾಗಿದ್ದುಅಧಿಕಾರಕ್ಕೆ ಬಂದರೆ ಮುಕ್ತ ಗೋಮಾಂಸ ಮಾರಾಟಕ್ಕೆ ಅವಕಾಶ ನೀಡಲಾಗುವುದು ಎಂದು ಘೋಷಿಸಿದೆ.

ಈ ಬಗ್ಗೆ ಹುಮನಾಬಾದ್ ನಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ, ‘ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಗೋ ಮಾಂಸ ವ್ಯಾಪಾರಕ್ಕೆ ಪರವಾನಗಿ ನೀಡಲಾಗುವುದು’ ಎಂದು ಹೇ ಳಿದರು. ಹಸುಗಳನ್ನು ತಂದರೆ ಅದು ಹಾಲು ನೀ ಡದಿದ್ದರೆ ಮಾರಾಟ ಮಾಡಿ ಮತ್ತೊಂದು ಹಸು ತರಲು ಅನುಕೂಲ ಆಗಲಿದೆ. ಆದರೆ, ಈ ಕಾಯ್ದೆ ಜಾರಿ ಇರುವುದರಿಂದ ರೈತರು ಯಾರಿಗೆ ಮಾರಾಟ ಮಾಡಬೇಕು? ಹಾಗಾಗಿ, ಗೋ ಹತ್ಯೆ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಲಾಗುವುದು ಎಂ ದರು. ಜೆಡಿಎಸ್ ಅಭ್ಯರ್ಥಿ ಸಿ.ಎಂ . ಫೈ ಜ್, ಜೆಡಿಎಸ್ ತಾಲೂಕು ಅಧ್ಯಕ್ಷ ಗೌತಮ ಸಾಗರ, ಮುಖಂಡರಾದ ಅಂಕುಶ ಗೋಖಲೆ, ಎ.ಎಂ . ಕುಲಕರ್ಣಿ , ಶಿವಪುತ್ರ ಮಾಳಗೆ ಇದ್ದರು.

Related posts

ಸುಳ್ಳು ಮಾಹಿತಿ ಆಧರಿಸಿ ಇಬ್ಬರು ಯುವಕರ ಬಂಧನ..! ನಾಲ್ವರು ಪೊಲೀಸರು ಅಮಾನತ್ತು..!

ಚಾರ್ಮಾಡಿ: ದಿನದ 24 ಗಂಟೆ ಲಘು ವಾಹನ ಸಂಚಾರ, ಸದ್ಯಕ್ಕಿಲ್ಲ ಘನ ವಾಹನಕ್ಕೆ ಅನುಮತಿ

ಮದುವೆಗೆ 13 ದಿನ ಇರುವಾಗಲೇ ಮಧುಮಗಳು ನೇಣಿಗೆ ಶರಣು..! ಇದೇನಿದು ಶಿವಮೊಗ್ಗದಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಪ್ರಕರಣ?