ಕರಾವಳಿ

ಬೆಂಗಳೂರಿನಲ್ಲಿ ಸುಳ್ಯದ ಸ್ನೇಹ ಶಾಲೆಯ ಸ್ಥಾಪಕ ಡಾ. ಚಂದ್ರಶೇಖರ ದಾಮ್ಲೆಗೆ ಸನ್ಮಾನ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ಗೌರವ

ನ್ಯೂಸ್ ನಾಟೌಟ್: ಪ್ರಕೃತಿಯ ಮಡಿಲಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸಿ ಸುಳ್ಯದಂತಹ ಸಣ್ಣ ನಗರದಲ್ಲಿ ಗುರುಕುಲ ಮಾದರಿಯಲ್ಲಿ ಕನ್ನಡ ಶಾಲೆಯನ್ನು ಕಟ್ಟಿದ ಸಾಧಕ ಡಾ. ಚಂದ್ರಶೇಖರ ದಾಮ್ಲೆಯವರನ್ನು ಶುಕ್ರವಾರ ಬೆಂಗಳೂರಿನಲ್ಲಿ ಸನ್ಮಾನಿಸಲಾಯಿತು.

ಉದ್ಯಾನನಗರಿಯ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿರುವ ಝೆನ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹಾಗೂ ನಿಸರ್ಗ ವಿದ್ಯಾರ್ಥಿ ನಿಕೇತನ ಶಾಲೆಯಲ್ಲಿ ವಿಶೇಷ ಉಪನ್ಯಾಸಕರಾಗಿ ತೆರಳಿದ್ದ ದಾಮ್ಲೆಯವರು ಅಲ್ಲಿನ ಶಿಕ್ಷಕಿಯರಿಗೆ ತರಬೇತಿ ನೀಡಿದರು. ಮಕ್ಕಳನ್ನು ಬೆಳೆಸುವ ಬಗ್ಗೆ ಅಮೂಲ್ಯ ಸಲಹೆಗಳನ್ನು ನೀಡಿದರು. ಮಾತ್ರವಲ್ಲ ಶಿಕ್ಷಣದ ಮೌಲ್ಯಗಳನ್ನು ಉಳಿಸುವಲ್ಲಿ ಹೆತ್ತವರ ಪಾತ್ರವೂ ಮುಖ್ಯವಾಗಿರುತ್ತದೆ ಎಂದು ದಾಮ್ಲೆಯವರು ತಿಳಿಸಿದರು. ಝೆನ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಪ್ರಶಾಂತಿ ರಾವ್ ಉಬರಡ್ಕ ವಂದಿಸಿದರು.

Related posts

ಸುಳ್ಯ: ಮಹಿಳೆಯರು ಮಕ್ಕಳಿದ್ದ ಶಿಫ್ಟ್ ಕಾರಿಗೆ ಗುದ್ದಿ ಪರಾರಿ! ಹಿಟ್ ಆ್ಯಂಡ್ ರನ್ ಮಾಡಿದ ಕಾರಿನವ ಸಿಕ್ಕಿಬಿದ್ದಿದ್ದೆಲ್ಲಿ..?

ಮಂಗಳೂರು: ಫುಟ್ಬಾಲ್ ಪಂದ್ಯದ ಜಗಳಕ್ಕೆ ವಿದ್ಯಾರ್ಥಿಗಳನ್ನು ಅಪಹರಿಸಿ, ಬಟ್ಟೆ ಬಿಚ್ಚಿಸಿ ಕ್ಷಮೆ ಕೇಳಿಸಿದ ಗ್ಯಾಂಗ್..! ಇಬ್ಬರನ್ನು ಬಂಧಿಸಿದ ಪೊಲೀಸರು..!

ಬಂಟ್ವಾಳ:ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯಸ್ಥ ಹುಡುಗಿಗೆ ಲೈಕ್ ಕೊಟ್ಟ ಯುವಕ ,ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯಿಂದ ತರಾಟೆ,ಮನನೊಂದು ಯುವಕ ಆತ್ಮಹತ್ಯೆಗೆ ಶರಣು