ಕರಾವಳಿ

ಉಚಿತ ಕಾದ ಜನರಿಗೆ ಸಿಹಿ ಸುದ್ದಿ ಜುಲೈ 1 ರಿಂದ ವಿದ್ಯುತ್ ಬಿಲ್ ಫ್ರೀ , ಆಗಸ್ಟ್‌ನಿಂದ ಕರೆಂಟ್ ಬಿಲ್ ಪಾವತಿಸಬೇಕಿಲ್ಲ: ಸಿಎಂ ಸಿದ್ದು ಭರ್ಜರಿ ಘೋಷಣೆ

ನ್ಯೂಸ್ ನಾಟೌಟ್ : ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿಗೆ ತರುವುದಕ್ಕೆ ಮುಂದಾಗಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಗ್ಯಾರಂಟಿ ನೀಡುವುದರ ಕುರಿತು ಚರ್ಚೆ ನಡೆಸಲಾಯಿತು. ಜುಲೈ 1 ರಿಂದ ವಿದ್ಯುತ್ ಬಿಲ್ ಫ್ರೀ ಅನ್ನುವುದನ್ನು ಘೋಷಿಸಲಾಯಿತು.

ಅಂದರೆ ಆಗಸ್ಟ್‌ ನಿಂದ 200 ಯೂನಿಟ್ ವರೆಗೆ ಬಿಲ್ ಕಟ್ಟಬೇಕಿಲ್ಲ ಅನ್ನುವುದನ್ನು ಸ್ವತಃ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳ ಕುರಿತು ಭಾರಿ ಚರ್ಚೆಯಾಗಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಹಲವಾರು ಗೊಂದಲಗಳು ಕೂಡ ಏರ್ಪಟ್ಟಿದ್ದವು. ಇದೀಗ ಸಿಎಂ ಸಿದ್ದರಾಮಯ್ಯ ಗ್ಯಾರಂಟಿಯ ಮೊದಲ ಭರವಸೆಯನ್ನು ಈಡೇರಿಸಿದಂತಾಗಿದೆ.

Related posts

ಪ್ರತಿಷ್ಠಿತ ಮಠದ ಸ್ವಾಮೀಜಿಯಿಂದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ

ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ ಬಹುಕೋಟಿ ಆಸ್ತಿ ಕಬಳಿಕೆ..? 21.5 ಎಕರೆ ದೇಗುಲದ ಭೂಮಿ ಮಾರಾಟಕ್ಕೆ ಕಸರತ್ತು..!

ಹಠಾತ್ ಹೃದಯಾಘಾತಕ್ಕೆ ಪುತ್ತೂರಿನ ಖ್ಯಾತ ಬೇಕರಿ ಮಾಲೀಕ ಬಲಿ, ತಡರಾತ್ರಿ ಸಂಭವಿಸಿತು ದುರಂತ