Uncategorized

ಚಿಕ್ಕಮಗಳೂರು: ನ.8ರಿಂದ ದತ್ತಮಾಲಾ ಅಭಿಯಾನ

ಚಿಕ್ಕಮಗಳೂರು: ಶ್ರೀರಾಮಸೇನೆ ವತಿಯಿಂದ ನವೆಂಬರ್ 8 ರಿಂದ 14ರವರೆಗೆ ಜಿಲ್ಲೆಯಲ್ಲಿ ದತ್ತಮಾಲಾ ಅಭಿಯಾನ ನಡೆಯಲಿದೆ ಎಂದು ಸಂಘಟನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಇಲ್ಲಿ ಸೋಮವಾರ ಹೇಳಿದರು.

8ರಂದು ಬೆಳಿಗ್ಗೆ 10 ಗಂಟೆಗೆ ನಗರದ ಶಂಕರ ಮಠದಲ್ಲಿ ದತ್ತ ಮಾಲಾಧಾರಣೆ ನಡೆಯಲಿದೆ. 11ರಂದು ದತ್ತ ದೀಪೋತ್ಸವ ಜರುಗಲಿದೆ. 12ರಂದು ನಗರದಲ್ಲಿ ಪಡಿ ಸಂಗ್ರಹ, 14ರಂದು ದತ್ತ ಪೀಠದಲ್ಲಿ ಧಾರ್ಮಿಕ ಕೈಂಕರ್ಯ ಹಾಗೂ ಸಭೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘2019ರಲ್ಲಿ ದತ್ತ ಮಾಲಾ ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ ಶೋಭಾಯಾತ್ರೆಯಲ್ಲಿ ಗುರುದತ್ತಾತ್ರೇಯರ ವಿಗ್ರಹವನ್ನು ಮೆರವಣಿಗೆ ನಡೆಸಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಅದರ ಪ್ರತಿಭಟನಾರ್ಥವಾಗಿ ಈ ಭಾರಿ ಶೋಭಾಯಾತ್ರೆ ನಡೆಸುತ್ತಿಲ್ಲ’ ಎಂದರು.

ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ, ಅಡ್ಯಾರ್, ಜಿಲ್ಲಾ ಘಟಕದ ಅಧ್ಯಕ್ಷ ರಂಜಿತ್‌ಶೆಟ್ಟಿ, ಸದಸ್ಯರಾದ ಜ್ಞಾನೇಂದ್ರ, ಪುನೀತ್, ಅರ್ಜುನ್, ದುರ್ಗಾ ಸೇನೆ ಜಿಲ್ಲಾಘಟಕದ ಅಧ್ಯಕ್ಷೆ ಶಾರದಮ್ಮ ಇದ್ದರು. 

Related posts

ಮುಸ್ಲಿಂ ವ್ಯಕ್ತಿಗೆ ಗ್ರಾ. ಪಂಚಾಯತಿ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ 15 ಹಿಂದೂ ಗ್ರಾ.ಪಂ. ಸದಸ್ಯರು ರಾಜೀನಾಮೆ,ಆಮೇಲೇನಾಯ್ತು ?

ಮುಸ್ಲಿಂಮರೇ ಇಲ್ಲದ ಗ್ರಾಮದಲ್ಲೂ ನಡೆಯುತ್ತೆ ಮೊಹರಂ ಹಬ್ಬದ ಆಚರಣೆ..! ಹಬ್ಬ ಆಚರಿಸುವವರು ಯಾರು? ಏನಿದರ ವಿಶೇಷತೆ?

ಬಾಲಿವುಡ್‌ನಲ್ಲಿ ‘ರಾವಣ’ ಆಗ್ತಿದ್ದಾರಾ ರಾಕಿಂಗ್ ಸ್ಟಾರ್ ಯಶ್..!,ರೆಡ್ ಚಿಲ್ಲೀಸ್ ಕಂಪನಿ‌ ಜೊತೆ ಸಿನಿಮಾ ಮಾಡಲಿದ್ದಾರೆಯೇ ‘ಟಾಕ್ಸಿಕ್’​ ನಾಯಕ?