ನ್ಯೂಸ್ ನಾಟೌಟ್: ಸರಣಿ ಭೂಕಂಪನಕ್ಕೆ ಕಾರಣವಾಗಿರುವ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳಾದ ಚೆಂಬು ಗ್ರಾಮ ಹಾಗೂ ಅರಂತೋಡಿನಲ್ಲಿ ಇದೀಗ ಮತ್ತೊಮ್ಮೆ ಭಾರಿ ಶಬ್ಧವಾಗಿದೆ. ಇದೀಗ (ಸೋಮವಾರ) ಸಂಜೆ ೪.೫ಕ್ಕೆ ಶಬ್ಧ ಕೇಳಿ ಬಂದಿದೆ ಎಂದು ತಿಳಿದು ಬಂದಿದೆ. ಆದರೆ ಯಾವುದೇ ರೀತಿಯ ಕಂಪನದ ಅನುಭವ ಆಗಿಲ್ಲ ಎಂದು ಗ್ರಾಮಸ್ಥರೊಬ್ಬರು ನ್ಯೂಸ್ ನಾಟೌಟ್ ಗೆ ಸ್ಪಷ್ಟಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ೧೦ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದೆ. ಈ ಭಾಗದ ಜನರು ಇದರಿಂದ ಭಾರಿ ಆತಂಕಕ್ಕೆ ಒಳಗಾಗಿದ್ದಾರೆ.
previous post