ಜೀವನಶೈಲಿಸಿನಿಮಾ

ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ‘ಚಾರ್ಲಿ 777’ ಸಿನಿಮಾದ ನಿರ್ದೇಶಕ, ಸುಳ್ಯ ಕೇರ್ಪಳ ಮೂಲದ ಕಿರಣ್ ರಾಜ್ ಅನಯಾ ವಸುಧಾ ಜೊತೆ ಎಂಗೇಜ್

ನ್ಯೂಸ್‌ ನಾಟೌಟ್‌: ಕನ್ನಡದ ಸೂಪರ್ ಹಿಟ್ ಸಿನಿಮಾ ಚಾರ್ಲಿ-777 ಚಿತ್ರದ ನಿರ್ದೇಶಕ ಕಿರಣ್ ರಾಜ್ (Kiranraj) ಅವರ ನಿಶ್ಚಿತಾರ್ಥ ನೆರವೇರಿದೆ. ಕಾಸರಗೋಡು ಮೂಲದ ಅನಯಾ ವಸುಧಾ (Anaya Vasudha) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಮಂಗಳೂರಿನ (Mangaluru) ಖಾಸಗಿ ಹೋಟೆಲ್‌ನಲ್ಲಿ ಈ ಕಾರ್ಯಕ್ರಮ ಸರಳವಾಗಿ ನಡೆದಿದ್ದು, ಉಂಗುರ ಬದಲಾಯಿಸುವುದರ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ಸ್ನೇಹಿತರು ಫ್ಯಾಮಿಲಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು,ಇವರಿಗೆ ಶುಭ ಹಾರೈಸಿದ್ದಾರೆ. ನಿರ್ದೇಶಕ ಕಿರಣ್ ರಾಜ್ ಅವರು ಸುಳ್ಯ ಕೇರ್ಪಳದ ದಿ. ಅಚ್ಚುತ ಮಣಿಯಾಣಿ ಹಾಗೂ ಶ್ರೀಮತಿ ಗೋದಾವರಿ ದಂಪತಿಯ ಹಿರಿಯ ಪುತ್ರರಾಗಿದ್ದು,ಸದ್ಯ ಕಿರಣ್ ರಾಜ್ ಅವರು ಮಂಗಳೂರಿನಲ್ಲಿ ನೆಲೆಸಿದ್ದಾರೆ‌.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಸಿನಿಮಾವನ್ನು ಕಿರಣ್ ನಿರ್ದೇಶನ ಮಾಡಿ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸಿದ್ದ ಇವರು ಎಲ್ಲರ ಗಮನ ಸೆಳೆದಿದ್ದರು. ವಿಭಿನ್ನ ಕಥಾ ಹಂದರವಿದ್ದ, ಚಾರ್ಲಿ ಸಿನಿಮಾ ಸೂಪರ್ ಹಿಟ್ ಆಗಿ ಕಿರಣ್ ಅವರಿಗೆ ಚಂದನವನದಲ್ಲಿ ಹೆಸರು ತಂದುಕೊಟ್ಟಿತ್ತು.

Related posts

ಬೇಸಿಗೆಯಲ್ಲಿ ಪದೇ ಪದೇ ಪ್ರಿಜ್ ನೀರು ಕುಡಿತ್ತಿದ್ದೀರಾ? ಹಾಗಾದ್ರೆ ಎಚ್ಚರ!!ಏನೆಲ್ಲಾ ಸಮಸ್ಯೆಗಳಾಗುತ್ತವೆ ಓದಿ…

ವಕೀಲರ ಮುಂದೆ ನಟ ದರ್ಶನ್ ಕಣ್ಣೀರು..! ನಾನೇನು ಮಾಡಿಲ್ಲ, ನನಗೇನು ಗೊತ್ತಿಲ್ಲ, ನನ್ನನ್ನು ಬಿಟ್ಟುಬಿಡಿ ಎಂದ ಡಿ ಬಾಸ್..!

ಅರ್ಧ ಹೆಣ್ಣು, ಅರ್ಧ ಗಂಡು ಹಕ್ಕಿಯನ್ನು ಎಲ್ಲಾದರೂ ನೋಡಿದ್ದೀರಾ? 100 ವರ್ಷ ಅಪರೂಪದ ಅನ್ವೇಷಣೆಯಲ್ಲಿ ಪತ್ತೆಯಾದ ಈ ಹಕ್ಕಿಯ ವಿಶೇಷತೆಗಳೇನು?