Uncategorized

ದೇವರನ್ನು ಹೊತ್ತು ಸಾಗುತ್ತಿದ್ದಾಗ ಅಗ್ನಿ ಕುಂಡಕ್ಕೆ ಬಿದ್ದ ಅರ್ಚಕಿ:ಗಾಯಾಳು ಅರ್ಚಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ನ್ಯೂಸ್ ನಾಟೌಟ್ : ಅಗ್ನಿ ಕುಂಡಕ್ಕೆ ಬಿದ್ದು ಅರ್ಚಕಿಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದೊಡ್ಡಬಳ್ಳಾಪುರದ ದೊಡ್ಡಬೆಳವಂಗಲ ಗ್ರಾಮದಲ್ಲಿ ನಡೆದಿದೆ.ಅಗ್ನಿಕುಂಡದಲ್ಲಿ ದೇವರನ್ನು ಹೊತ್ತು ಹಾದು ಹೋಗುವ ವೇಳೆ ಆಕಸ್ಮಿಕವಾಗಿ ಬಿದ್ದು ಅರ್ಚಕಿ ಗಾಯಗೊಂಡಿದ್ದು,ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಘಟನೆ ನಡೆದಿದ್ದು ಹೇಗೆ ?  

ದೇವಸ್ಥಾನದ ಅರ್ಚಕಿ ರೇಣುಕಾ ಯಲ್ಲಮ್ಮ ಅನುಜೋಗತಿಯಮ್ಮ ಗಾಯಗೊಂಡವರು.ದೊಡ್ಡಬೆಳವಂಗಲದ ಶಾಂತಿ ನಗರದಲ್ಲಿರುವ ಅಜ್ಜನಕಟ್ಟೆ ರೇಣುಕಾ ಯಲ್ಲಮ್ಮ ದೇವಸ್ಥಾನದದಲ್ಲಿ ಅಗ್ನಿಕೊಂಡ ಸೇವೆ ವೇಳೆ ಈ ಅವಘಡ ನಡೆದಿದೆ. ಕಳಶ ಹೊತ್ತಿದ್ದ ಅನುಜೋಗತಿಯಮ್ಮ ಅಗ್ನಿಕೊಂಡ ಪ್ರವೇಶಿಸಿದರು. ಈ ವೇಳೆ ಆಕಸ್ಮಿಕವಾಗಿ ಅಗ್ನಿ ಕುಂಡದಲ್ಲಿ ಬಿದ್ದು ಅಸ್ವಸ್ಥಗೊಂಡರು.ಕೂಡಲೇ‌ ಸ್ಥಳದಲ್ಲಿದ್ದ ಭಕ್ತರು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನಂತರ ದೇವಾಲಯಕ್ಕೆ ಮತ್ತೆ
ಮರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Related posts

ಹಾಲಿನ ಪ್ಯಾಕೇಟ್ ನಲ್ಲಿ ದಿವಂಗತ ಪುನೀತ್ ರಾಜ್‌ಕುಮಾರ್‌ ಫೋಟೋ, ಸುಳ್ಳು ಸುದ್ದಿ..!

ಹಿಜಾಬ್ ವಿರುದ್ಧ ಬೀದಿಗಿಳಿದ ಇರಾನ್ ಮಹಿಳೆಯರು

ಸರ್ಕಾರಿ ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಕುಡಿದ ಮತ್ತಿನಲ್ಲಿ ಹಲ್ಲೆ..! ಪೊಲೀಸ್​ ಕಮಿಷನರ್ ​​ಗೆ ಪತ್ರ ಬರೆಯುತ್ತೇನೆ ಎಂದ ಸಾರಿಗೆ ಸಚಿವ..! ಇಲ್ಲಿದೆ ಸಿಸಿಟಿವಿ ದೃಶ್ಯ