ಕ್ರೈಂದೇಶ-ಪ್ರಪಂಚದೇಶ-ವಿದೇಶವಿಡಿಯೋವೈರಲ್ ನ್ಯೂಸ್

ದಟ್ಟಣೆಯಲ್ಲಿ ರೈಲು ಹತ್ತಲು ಸಾಧ್ಯವಾಗದ್ದಕ್ಕೆ ಎಸಿ ಬೋಗಿಗಳನ್ನು ಧ್ವಂಸಗೊಳಿಸಿದ ಜನ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್‌ ನಾಟೌಟ್: ಉತ್ತರ ಪ್ರದೇಶದ ಪ್ರಯಾಗ್ ​ರಾಜ್ ​ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ದೇಶದ ವಿವಿಧ ಮೂಲೆಗಳಿಂದ ಇದನ್ನು ಕಣ್ತುಂಬಿಕೊಳ್ಳಲು ಭಕ್ತರು ಹೋಗುತ್ತಿದ್ದಾರೆ. ಪ್ರಯಾಗ್ ​ರಾಜ್ ​ಗೆ ಹೋಗಲು ಭಕ್ತರು ಬಿಹಾರದ ಮಧುಬನಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದು, ಜನದಟ್ಟಣೆಯಿಂದಾಗಿ ರೈಲು ಹತ್ತಲು ಸಾಧ್ಯವಾಗದಿದ್ದದ್ದಕ್ಕೆ ಜನರು ಎಸಿ ಬೋಗಿಗಳನ್ನು ಧ್ವಂಸಗೊಳಿಸಿರುವ ಘಟನೆ ವರದಿಯಾಗಿದೆ.

ವಿಡಿಯೋದಲ್ಲಿ ಪ್ರಯಾಣಿಕರು ರೈಲಿನ ಮೇಲೆ ಕಲ್ಲು ತೂರಾಟ ನಡೆಸಿ, ಕಿಟಕಿಗಳನ್ನು ಒಡೆದು, ಬಲವಂತವಾಗಿ ಬೋಗಿಗಳಿಗೆ ಪ್ರವೇಶಿಸುವುದನ್ನು ಕಾಣಬಹುದು. ಎಸಿ ಬೋಗಿಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು ಎನ್ನಲಾಗಿದೆ. ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದಂತೆ, ಕೆಲವು ಪ್ರಯಾಣಿಕರು ಕಿಟಕಿಗಳ ಮೂಲಕ ಹತ್ತಲು ಪ್ರಯತ್ನಿಸಿದರು, ಆದರೆ ಇತರರು ಕೋಪದಿಂದ ಕಲ್ಲುಗಳನ್ನು ಎಸೆದು ಗಾಜು ಒಡೆದರು. ಮಧುಬನಿ ಮತ್ತು ದರ್ಭಂಗಾ ನಡುವಿನ ಪ್ರದೇಶಗಳಲ್ಲಿ ರೈಲು ಇದೇ ರೀತಿಯ ಅವ್ಯವಸ್ಥೆಗಳನ್ನು ಹಲವು ಬಾರಿ ಎದುರಿಸಿತು. ಮಿಥಿಲಾಂಚಲ್ ಪ್ರದೇಶದ ಸಾವಿರಾರು ಜನರು ಮಾಘ ಪೂರ್ಣಿಮೆಗೆ ಪ್ರಯಾಗರಾಜ್‌ ಗೆ ಧಾವಿಸುತ್ತಿರುವುದರಿಂದ ಜನದಟ್ಟಣೆ ಹೆಚ್ಚಾಗಿದೆ ಎನ್ನಲಾಗಿದೆ.

Click

ಶಾಲಾ ಬೀಳ್ಕೊಡುಗೆ ನೆಪದಲ್ಲಿ ಐಷಾರಾಮಿ ಕಾರುಗಳಲ್ಲಿ 12ನೇ ತರಗತಿ ವಿದ್ಯಾರ್ಥಿಗಳ ಸ್ಟಂಟ್..! 26 ಕಾರುಗಳ ಪೈಕಿ 12 ಕಾರುಗಳನ್ನು ವಶಕ್ಕೆ..!

ಸಂಜಯ್ ದತ್ ಹೆಸರಿಗೆ 72 ಕೋಟಿ ರೂ. ಆಸ್ತಿ ಬರೆದಿದ್ದ ಅಭಿಮಾನಿ..! ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸಲಿರುವ ಬಾಲಿವುಡ್ ನಟ

Related posts

ಆಂಧ್ರ ಸಿಎಂ ವಿರುದ್ಧ ಎಡಿಟ್‌ ಮಾಡಿದ ಅವಹೇಳನಕಾರಿಯಾಗಿ ಚಿತ್ರಗಳನ್ನು ಪೋಸ್ಟ್ ಮಾಡಿದ ನಿರ್ದೇಶಕ..! ತಲೆಮರೆಸಿಕೊಂಡ ರಾಮ್‌ ಗೋಪಾಲ್‌ ವರ್ಮಾ..?

ಜೆಡಿಎಸ್‌–ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾರಾಮಾರಿ..! ಹೋಟೆಲ್ ಮುಂದೆ ಹೈಡ್ರಾಮಾ

ಪುತ್ತೂರು: ಬೆಳ್ಳಂಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ..! ಅಪಾಯದಿಂದ ಪಾರಾದ ರೋಗಿಗಳು..!